ಯುಎಇಯಲ್ಲಿ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುವ ತಂಡಗಳಿಗಿಂತ ಗುರಿ ಬೆನ್ನತ್ತುವ ತಂಡಗಳು ಹೆಚ್ಚು ಪಂದ್ಯಗಳಲ್ಲಿ ಜಯ ಸಾಧಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವದಿಗ್ಗಜ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಎರಡೂ ತಂಡಗಳಿಗೆ ಸಮಬಲದ ಹೋರಾಟ ನೀಡಲು ಸಾಧ್ಯವಾಗುವಂತಹ ಪಿಚ್ಗಳ ನಿರ್ಮಾಣದತ್ತ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಗಮನ ಹರಿಸಬೇಕು ಎಂದುಸಲಹೆ ನೀಡಿದ್ದಾರೆ.
ಭಾನುವಾರ ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ ಅಂತರದ ಗೆಲುವು ಸಾಧಿಸಿದ ಆಸ್ಟ್ರೇಲಿಯಾ, ಮೊದಲ ಬಾರಿಗೆ ಚುಟುಕು ವಿಶ್ವಕಪ್ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಟೂರ್ನಿಯ ಒಟ್ಟು45 ಪಂದ್ಯಗಳ ಪೈಕಿ 29ರಲ್ಲಿ ಚೇಸಿಂಗ್ ಮಾಡಿದ ತಂಡಗಳೇ ಗೆಲುವು ಸಾಧಿಸಿವೆ. ಫೈನಲ್ ಮತ್ತುಎರಡು ಸೆಮಿಫೈನಲ್ಗಳಲ್ಲಿಯೂ ಗುರಿ ಬೆನ್ನತ್ತಿದ ತಂಡಗಳೇ ಜಯ ಕಂಡಿವೆ. ಜೊತೆಗೆ ಟಾಸ್ ಗೆದ್ದ ತಂಡಗಳು ಮೊದಲು ಬೌಲಿಂಗ್ ಮಾಡಲು ಮುಂದಾಗುತ್ತಿದ್ದವು. ಯುಎಇ ಪಿಚ್ಗಳು ಎರಡನೇ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ ತಂಡಕ್ಕೆ ನೆರವು ನೀಡುತ್ತಿವೆ ಎಂಬುದನ್ನು ಈ ಅಂಶಗಳು ಪುಷ್ಟೀಕರಿಸುತ್ತವೆ.
ಹೀಗಾಗಿ ಗಾವಸ್ಕರ್ ಅವರು, ಸ್ಪರ್ಧಾತ್ಮಕ ಪಿಚ್ಗಳ ನಿರ್ಮಾಣಕ್ಕೆ ಒತ್ತು ನೀಡುವಂತೆ ಐಸಿಸಿಗೆ ಸಲಹೆ ನೀಡಿದ್ದಾರೆ.
ಒಟ್ಟು 26 ಪಂದ್ಯಗಳು ರಾತ್ರಿ ವೇಳೆ ನಡೆದಿವೆ. ಈ ಪೈಕಿ 16 ಪಂದ್ಯಗಳಲ್ಲಿ ಎರಡನೇ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ ತಂಡಗಳಿಗೆ ಜಯ ದೊರೆತಿದೆ. ಹೀಗಾಗಿ ಕೆಲವರು, ರಾತ್ರಿವೇಳೆ ಇಬ್ಬನಿ ಬೀಳುವುದರಿಂದ ಚೇಸಿಂಗ್ ತಂಡಗಳಿಗೆ ಅನುಕೂಲವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದಾಗ್ಯೂ, ಇಬ್ಬನಿಯ ಅಂಶ ಅಷ್ಟೇನೂ ಪರಿಣಾಮ ಬೀರಿಲ್ಲ ಎಂದು ನನಗನಿಸುತ್ತದೆ ಎಂದು ಗಾವಸ್ಕರ್ ಹೇಳಿದ್ದಾರೆ.
ಇವನ್ನೂ ಓದಿ
*T20 WC: ಟಿ20 ವಿಶ್ವಕಪ್ನ ಪ್ರಮುಖ 10 ಅಂಶಗಳು
*ಸೋಲಿಗೆ ವಿಷಾದವಿಲ್ಲ; ಛಲ ಕೈಬಿಡಲ್ಲ: ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೆಡ್
*T20 WC: ಮಾರ್ಷ್-ವಾರ್ನರ್ ಅಬ್ಬರ; ಕಿವೀಸ್ ಮಣಿಸಿದ ಆಸ್ಟ್ರೇಲಿಯಾ ವಿಶ್ವ ಚಾಂಪಿಯನ್
*T20 WC: ಕ್ಯಾಚ್ ಕೈಚೆಲ್ಲಿದ ಹಸನ್ ಅಲಿ ಬಹಿರಂಗ ಕ್ಷಮೆಯಾಚನೆ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.