ADVERTISEMENT

ಕೊರೊನಾವೈರಸ್ ಭೀತಿ ನಡುವೆ ಪಾರ್ಟಿ: ಅವಿವೇಕಿಗಳಿಂದಾಗಿ ಹೋರಾಟ ವ್ಯರ್ಥ ಎಂದ ಬೋಗ್ಲೆ

ಏಜೆನ್ಸೀಸ್
Published 21 ಮಾರ್ಚ್ 2020, 4:25 IST
Last Updated 21 ಮಾರ್ಚ್ 2020, 4:25 IST
   

ನವದೆಹಲಿ:ಕೊರೊನಾ ವೈರಸ್‌ ಸೋಂಕು ಪ್ರಕರಣಗಳುದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂಗುಂಪು ಸೇರಿವಿನೋದ ಕೂಟಗಳನ್ನು (ಪಾರ್ಟಿ) ನಡೆಸುವವರ ವಿರುದ್ಧ ಭಾರತದ ಕ್ರಿಕೆಟ್‌ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಕಿಡಿ ಕಾರಿದ್ದಾರೆ.

ಇತ್ತೀಚೆಗೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದ ಔತಣಕೂಟದಲ್ಲಿ ಭಾಗವಹಿಸಿದ್ದ ಬಾಲಿವುಡ್‌ ಗಾಯಕಿ ಕನಿಕಾ ಕಪೂರ್‌ (41) ಅವರಿಗೆ ಸೋಂಕು ಇರುವುದು ಶುಕ್ರವಾರ ದೃಢಪಟ್ಟಿತ್ತು. ಇದೇ ಕಾರ್ಯಕ್ರಮದಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿವಸುಂಧರಾ ರಾಜೇ, ಅವರ ಮಗ ಸಂಸದ ದುಷ್ಯಂತ್‌ ಸಿಂಗ್‌ ಹಾಗೂ ಉತ್ತರ ಪ್ರದೇಶದ ಆರೋಗ್ಯ ಸಚಿವಜೈ ಪ್ರತಾಪ್‌ ಸಿಂಗ್‌ ಸೇರಿ ನೂರಕ್ಕೂ ಹೆಚ್ಚು ಗಣ್ಯರು ಭಾಗವಹಿಸಿದ್ದರು.ಸಭೆ ಬಳಿಕ ದುಷ್ಯಂತ್‌ ಸಂಸತ್ತಿಗೂ ತೆರಳಿದ್ದರು.

ಭಾರತದಲ್ಲಿ ಸದ್ಯ ಸೋಂಕಿತರ ಸಂಖ್ಯೆ 258ಕ್ಕೆ ಏರಿಕೆಯಾಗಿದೆ. ಹೀಗಾಗಿ ಪಾರ್ಟಿ ಮಾಡುವವರ ವಿರುದ್ಧ ಹರಿಹಾಯ್ದಿರುವ ಬೋಗ್ಲೆ, ‘ಸಾಕಷ್ಟು ಜನರು ಕೊರೊನಾ ವೈರಸ್‌ ಸೋಂಕು ತಡೆಗಾಗಿ ಕಠಿಣ ಪ್ರಯತ್ನ ಮಾಡುತ್ತಿರುವಾಗ, ಸೋಂಕು ಪೀಡಿತ ಪ್ರದೇಶಗಳಿಂದ ಬಂದ ಕೆಲ ವಿದ್ಯಾವಂತ ಮೂರ್ಖರು ಪಾರ್ಟಿಗಳಿಗೆ ಹಾಜರಾಗುತ್ತಿರುವುದು ತುಂಬಾ ನಿರಾಶಾದಾಯಕವಾದುದು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಲಕ್ಷಾಂತರ ಜನರುಸರಿಯಾದದ್ದನ್ನು ಮಾಡಬಲ್ಲರು. ಆದರೆ, ಕೆಲವು ಅವಿವೇಕಿಗಳು ಅವರ ಹೋರಾಟವನ್ನು ವ್ಯರ್ಥ ಮಾಡುತ್ತಿದ್ದಾರೆ. ನಾವು ಜಾಗರೂಕರಾಗಿರೋಣ.ಒಗ್ಗಟ್ಟಾಗಿ ಇರೋಣ’ ಎಂದು ಕರೆ ನೀಡಿದ್ದಾರೆ.

ಕೋವಿಡ್‌–19 ಸೋಂಕಿನ ಬಗ್ಗೆ ಎಚ್ಚರದಿಂದ ಇರುವಂತೆ ಮನವಿ ಮಾಡಿರುವ ಪ್ರಧಾನಿ ಮೋದಿ, ಭಾನುವಾರ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ಇದಕ್ಕೆರಾಜ್ಯದಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ರಾಜ್ಯ ಸಂಪೂರ್ಣ ಸ್ಥಗಿತವಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.