ADVERTISEMENT

ಮಳೆ ಅಡ್ಡಿ: ಆರಂಭವಾಗದ ಭಾರತ, ಶ್ರೀಲಂಕಾ ಎ ತಂಡಗಳ ಕ್ರಿಕೆಟ್ ಪಂದ್ಯ      

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 5:56 IST
Last Updated 13 ಜೂನ್ 2019, 5:56 IST
   

ಹುಬ್ಬಳ್ಳಿ: ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವೆ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯವು ಮಳೆಯ ಕಾರಣದಿಂದ ಇನ್ನೂ ಆರಂಭವಾಗಿಲ್ಲ.

ಆಗಾಗ ತುಂತುರು ಮಳೆ ಆಗುತ್ತಿರುವುದರಿಂದ ಪಂದ್ಯ ಆರಂಭಕ್ಕೆ ಅಡ್ಡಿಯಾಗಿದೆ. ಬೆಳಿಗ್ಗೆ 9 ಕ್ಕೆ ಪಂದ್ಯ ಆರಂಭವಾಗಬೇಕಿತ್ತು. ಎರಡೂ ತಂಡಗಳ ಆಟಗಾರರು ಹೋಟೆಲ್ ನಲ್ಲೆ ತಂಗಿದ್ದಾರೆ. ಇನ್ನೂ ಕ್ರೀಡಾಂಗಣಕ್ಕೆ ಬಂದಿಲ್ಲ. ಮಳೆಯ ಕಾರಣಕ್ಕೆ ಪಿಚ್ ಗೆ ಮೈದಾನದ ಸಿಬ್ಬಂದಿ ಹೊದಿಕೆ ಹೊದಿಸಿದ್ದಾರೆ.

ಬಿಡುವ ನೀಡಿದರೆ ಮಾತ್ರ ಪಂದ್ಯ ಆರಂಭವಾಗಲಿದೆ. ಇಲ್ಲವಾದರೆ ಪಂದ್ಯ ರದ್ದುಗೊಳ್ಳುವ ಸಾಧ್ಯತೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.