ADVERTISEMENT

ಏಕದಿನದಲ್ಲಿ ಎಂಜಲು ಅಗತ್ಯವಿಲ್ಲ: ಉನದ್ಕತ್

ಪಿಟಿಐ
Published 4 ಮೇ 2020, 3:46 IST
Last Updated 4 ಮೇ 2020, 3:46 IST
ಜಯದೇವ ಉನದ್ಕತ್ –ಎಎಫ್‌ಪಿ ಚಿತ್ರ
ಜಯದೇವ ಉನದ್ಕತ್ –ಎಎಫ್‌ಪಿ ಚಿತ್ರ   

ನವದೆಹಲಿ: ಕೊರೊನಾ ಹಾವಳಿಯ ನಂತರ ಕ್ರಿಕೆಟ್ ಆರಂಭವಾದ ಮೇಲೆ ಚೆಂಡು ಸ್ವಿಂಗ್ ಆಗಲು ಎಂಜಲು ಬಳಸಬೇಕೇ ಬೇಡವೇ ಎಂಬುದರ ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಎಂಜಲಿಗೆ ಅಷ್ಟೇನೂ ಮಹತ್ವ ಇಲ್ಲ ಎಂದು ವೇಗದ ಬೌಲರ್ ಜಯದೇವ ಉನದ್ಕತ್‌ ಅಭಿಪ್ರಾಯ ಪಟ್ಟಿದ್ದಾರೆ.

‘ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ನಲ್ಲಿ ರಿವರ್ಸ್ ಸ್ವಿಂಗ್‌ ದೊಡ್ಡ ವಿಷಯವಲ್ಲ. ಏಕದಿನ ಕ್ರಿಕೆಟ್‌ನಲ್ಲಿ ಪ್ರತಿ 25 ಓವರ್‌ಗಳಿಗೆ ಹೊಸ ಚೆಂಡನ್ನು ಬಳಸಲಾಗುತ್ತದೆ. ಅದಕ್ಕೆ ಎಂಜಲು ಹಚ್ಚುವ ಅಗತ್ಯವಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT