ವೆಲ್ಲಿಂಗ್ಟನ್: ‘ಸ್ಟಂಪ್ ಹಿಂದೆ ಮಹೇಂದ್ರ ಸಿಂಗ್ ಧೋನಿ ಇರಬೇಕಾದರೆ ಬ್ಯಾಟ್ಸ್ಮನ್ಗಳು ಕ್ರೀಸ್ ಅನ್ನು ಬಿಡಬಾರದು’ ಎಂದು ಐಸಿಸಿ ಮಾಡಿದ್ದ ಟ್ವೀಟ್ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಭಾನುವಾರ ನ್ಯೂಜಿಲೆಂಡ್ ವಿರುದ್ಧ ನಡೆದ ಐದನೇ ಏಕದಿನ ಪಂದ್ಯದಲ್ಲಿ ಭಾರತ 35 ರನ್ಗಳ ಅಂತರದಿಂದ ಗೆಲುವು ಸಾಧಿಸಿತ್ತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಂಬಟಿ ರಾಯುಡು ಹಾಗೂ ಆಲೌರೌಂಡರ್ ಹಾರ್ದಿಕ್ ಪಾಂಡ್ಯ ಅವರು ಉತ್ತಮ ಜೊತೆಯಾಟ ನೆರವಿನಿಂದ 49.5 ಓವರ್ಗಳಲ್ಲಿ 252 ರನ್ ಗಳಿಸಿ ಆಲೌಟ್ ಆಗಿತ್ತು.
ಈ ಗುರಿ ಬೆನ್ನತ್ತಿದ ಕಿವೀಸ್ ಪಡೆಗೆ ಆಸೆರೆಯಾಗಿದ್ದ ಜಿಮ್ಮಿನಿಶಾಮ್ ಅವರನ್ನು ಕೇದಾರ್ ಜಾಧವ್ ಎಸೆದ 37ನೇ ಓವರ್ನಲ್ಲಿ ಧೋನಿ ರನೌಟ್ ಮಾಡಿದರು. ಬಳಿಕ ಕ್ರೀಸ್ಗೆ ಬಂದ ಆಟಗಾರರು ಬಹುಬೇಗ ಔಟಾದರು(44.1 ಓವರ್ಗಳಲ್ಲಿ 217 ರನ್ ಗಳಿಸಿ ಆಲೌಟ್ ಆಯಿತ್ತು).
ಧೋನಿಯ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಮಾಡಿದ್ದ ಟ್ವೀಟ್ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಐದು ಪಂದ್ಯ ಏಕದಿನ ಸರಣಿಯನ್ನು ಭಾರತ 4–1ರಲ್ಲಿ ಗೆದ್ದುಕೊಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.