ADVERTISEMENT

ದಕ್ಷಿಣ ಆಫ್ರಿಕಾ ‘ಎ’ ಎದುರಿನ ಕ್ರಿಕೆಟ್‌ ಸರಣಿ: ಮನೀಷ್‌, ಶ್ರೇಯಸ್‌ಗೆ ಸಾರಥ್ಯ

ಪಿಟಿಐ
Published 19 ಆಗಸ್ಟ್ 2019, 19:45 IST
Last Updated 19 ಆಗಸ್ಟ್ 2019, 19:45 IST
ಮನೀಷ್‌ ಪಾಂಡೆ
ಮನೀಷ್‌ ಪಾಂಡೆ   

ಮುಂಬೈ: ಕರ್ನಾಟಕದ ಮನೀಷ್‌ ಪಾಂಡೆ ಮತ್ತು ಮುಂಬೈಯ ಶ್ರೇಯಸ್‌ ಅಯ್ಯರ್‌ ಅವರು ಮುಂಬರುವ ದಕ್ಷಿಣ ಆಫ್ರಿಕಾ ‘ಎ’ ಎದುರಿನ ಐದು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಭಾರತ ‘ಎ’ ತಂಡವನ್ನು ಮುನ್ನಡೆಸಲಿದ್ದಾರೆ.

ತಿರುವನಂತಪುರದ ದಿ ಸ್ಪೋರ್ಟ್ಸ್‌ ಹಬ್‌ ಮೈದಾನದಲ್ಲಿ ಆಗಸ್ಟ್‌ 29, 31 ಹಾಗೂ ಸೆಪ್ಟೆಂಬರ್‌ 2,4 ಮತ್ತು 8ರಂದು ಪಂದ್ಯಗಳು ನಡೆಯಲಿವೆ.

ಈ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿಯು ಸೋಮವಾರ ತಂಡಗಳನ್ನು ಪ್ರಕಟಿಸಿದೆ.

ADVERTISEMENT

ತಂಡಗಳು ಇಂತಿವೆ: ಮೊದಲ ಮೂರು ಪಂದ್ಯಗಳಿಗೆ: ಮನೀಷ್‌ ಪಾಂಡೆ (ನಾಯಕ), ಋತುರಾಜ್‌ ಗಾಯಕವಾಡ್‌, ಶುಭಮನ್‌ ಗಿಲ್‌, ಅನಮೋಲ್‌ಪ್ರೀತ್‌ ಸಿಂಗ್‌, ರಿಕಿ ಭುಯಿ, ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್‌), ವಿಜಯ್‌ ಶಂಕರ್‌, ಶಿವಂ ದುಬೆ, ಕೃಣಾಲ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ಯಜುವೇಂದ್ರ ಚಾಹಲ್‌, ಶಾರ್ದೂಲ್‌ ಠಾಕೂರ್‌, ದೀಪಕ್‌ ಚಾಹರ್‌, ಖಲೀಲ್‌ ಅಹಮದ್‌ ಮತ್ತು ನಿತೀಶ್‌ ರಾಣಾ.

4 ಮತ್ತು 5ನೇ ಪಂದ್ಯಗಳಿಗೆ: ಶ್ರೇಯಸ್‌ ಅಯ್ಯರ್‌ (ನಾಯಕ), ಶುಭಮನ್‌ ಗಿಲ್‌, ಪ್ರಶಾಂತ್‌ ಚೋಪ್ರಾ, ಅನಮೋಲ್‌ಪ್ರೀತ್‌ ಸಿಂಗ್‌, ರಿಕಿ ಭುಯಿ, ಸಂಜು ಸ್ಯಾಮ್ಸನ್‌ (ವಿಕೆಟ್‌ ಕೀಪರ್‌), ನಿತೀಶ್‌ ರಾಣಾ, ವಿಜಯ್‌ ಶಂಕರ್‌, ಶಿವಂ ದುಬೆ, ವಾಷಿಂಗ್ಟನ್‌ ಸುಂದರ್‌, ಅಕ್ಷರ್‌ ಪಟೇಲ್‌, ರಾಹುಲ್‌ ಚಾಹರ್‌, ಶಾರ್ದೂಲ್‌ ಠಾಕೂರ್‌, ತುಷಾರ್‌ ದೇಶಪಾಂಡೆ ಮತ್ತು ಇಶಾನ್‌ ಪೊರೆಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.