ನವದೆಹಲಿ: ಕ್ರಿಕೆಟ್ನಿಂದ ಬಹಳ ದಿನಗಳವರೆಗೆ ದೂರ ಇರುವುದೆಂದರೆ ಕಠಿಣ ಶಿಕ್ಷೆಯನ್ನು ಅನುಭವಿಸಿದಂತೆ ಎಂದು ಭಾರತ ತಂಡದ ಆಟಗಾರ ಪೃಥ್ವಿ ಶಾ ಅಭಿಪ್ರಾಯಪಟ್ಟಿದ್ದಾರೆ.
ಮುಂಬೈನ ಪೃಥ್ವಿ ಉದ್ದೀಪನ ಮದ್ದು ಸೇವನೆಯಿಂದಾಗಿ ಹೋದ ವರ್ಷದ ಜುಲೈ ನಿಂದ ನವೆಂಬರ್ನವರೆಗೆ ಅಮಾನತುಗೊಂಡಿದ್ದರು. ಅವರು ಕೆಮ್ಮಿನ ಚಿಕಿತ್ಸೆಗಾಗಿ ಸೇವಿಸಿದ್ದ ಔಷಧಿಯಲ್ಲಿ ನಿಷೇಧಿತ ಮದ್ದಿನ ಅಂಶ ಇರುವುದು ದೃಢಪಟ್ಟಿತ್ತು.
ಆ ಘಟನೆಯ ಕುರಿತು ಡೆಲ್ಲಿ ಡೇರ್ಡೆವಿಲ್ಸ್ ವೆಬ್ಸೈಟ್ಗೆ ಮಾತನಾಡಿರುವ ಪೃಥ್ವಿ, ‘ಅದು ತಪ್ಪಾಗಿತ್ತು. ಅದಕ್ಕಾಗಿ ಬಹಳಷ್ಟು ಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದು ಮಾತ್ರ ಚಿತ್ರಹಿಂಸೆಯಾಗಿತ್ತು. ಆಗ ಮನದಲ್ಲಿ ಹಲವಾರು ಪ್ರಶ್ನೆಗಳು, ಸಂಶಯಗಳು ಹರಿದಾಡುತ್ತಿದ್ದವು. ಆದರೂ ನನ್ನ ಮೇಲೆ ನಾನು ನಂಬಿಕೆ ಇಟ್ಟುಕೊಂಡಿದ್ದೆ. ಫಿಟ್ನೆಸ್ಗಾಗಿ ಹೆಚ್ಚು ಸಮಯ ಇಡುತ್ತಿದ್ದೆ’ ಎಂದು ಪೃಥ್ವಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.