ADVERTISEMENT

KAR vs UP | ಆರ್ಯನ್‌ ಅರ್ಧಶತಕ: ಉತ್ತಮ ಮೊತ್ತದತ್ತ ಉತ್ತರ ಪ್ರದೇಶ

ರಣಜಿ ಕ್ರಿಕೆಟ್

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 9:37 IST
Last Updated 17 ಡಿಸೆಂಬರ್ 2019, 9:37 IST
   

ಹುಬ್ಬಳ್ಳಿ: ಕರ್ನಾಟಕ ಎದುರಿನರಣಜಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಉತ್ತರ ಪ್ರದೇಶ ತಂಡ ಮೊದಲ ದಿನವಾದ ಮಂಗಳವಾರದ ಮಧ್ಯಾಹ್ನದ ವಿರಾಮದ ವೇಳೆಗೆ 64 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 150 ರನ್‌ ಗಳಿಸಿದೆ.

ರಾಜನಗರದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ಪಂದ್ಯದಲ್ಲಿ ಉತ್ತರ ಪ್ರದೇಶ ಆರಂಭದಿಂದ ನಿಧಾನವಾಗಿ ರನ್ ಕಲೆಹಾಕಿತು.

ಮೊದಲ ವಿಕೆಟ್‌ ಜೊತೆಯಾಟದಲ್ಲಿ ಅಲ್ಮಾಸ್ ಶೌಕತ್‌ (22) ಮತ್ತು ಆರ್ಯನ್‌ ಜುಯಾಲ್‌ (ಬ್ಯಾಟಿಂಗ್‌ 77) 56 ಕಲೆ ಹಾಕಿದರು.

ADVERTISEMENT

ಮಾಧವ ಕೌಶಿಕ್‌ (15 ರನ್) ಮತ್ತು ಅಕ್ಷದೀಪ್ ನಾಥ್‌ (9) ಬೇಗನೆ ಪೆವಿಲಿಯನ್ ಸೇರಿದರು. ವೇಗಿಗಳಾದ ಅಭಿಮನ್ಯು ಮಿಥುನ್, ರೋನಿತ್ ಮೋರೆ ಮತ್ತು ಸ್ಪಿನ್ನರ್ ಶ್ರೇಯಸ್‌ ಗೋಪಾಲ್‌ ತಲಾ ಒಂದು ವಿಕೆಟ್ ಉರುಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.