ADVERTISEMENT

ಎಂಜಲು ಬಳಕೆಯಿಂದ ಸಮಸ್ಯೆಯಿಲ್ಲ: ದೀಪಕ್ ಚಾಹರ್

ಪಿಟಿಐ
Published 10 ಜೂನ್ 2020, 21:15 IST
Last Updated 10 ಜೂನ್ 2020, 21:15 IST
ದೀಪಕ್ ಚಾಹರ್
ದೀಪಕ್ ಚಾಹರ್   

ಮುಂಬೈ: ಚೆಂಡಿನ ಹೊಳಪು ನಿರ್ವಹಿಸಲು ಎಂಜಲು ಬಳಕೆಯನ್ನು ಐಸಿಸಿಯು ತಾತ್ಕಾಲಿಕವಾಗಿ ನಿಷೇಧಿಸಿರುವುದರಿಂದ ತಮ್ಮ ಬೌಲಿಂಗ್ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂದು ಮಧ್ಯಮವೇಗಿ ದೀಪಕ್ ಚಾಹರ್ ಹೇಳಿದ್ದಾರೆ.

ಸೀಮಿತ ಓವರ್‌ಗಳ ಪರಿಣತ ಬೌಲರ್ ಆಗಿರುವ ದೀಪಕ್, ‘ಟಿ20 ಮಾದರಿಯಲ್ಲಿ ಚೆಂಡು ಕೇವಲ ಎರಡು–ಮೂರು ಓವರ್‌ಗಳಲ್ಲಿ ಉತ್ತಮವಾಗಿ ಸ್ವಿಂಗ್ ಆಗುತ್ತದೆ. ಏಕೆಂದರೆ ಆ ಸಂದರ್ಭದಲ್ಲಿ ಪಿಚ್ ಹೊಸದಾಗಿರುತ್ತದೆ. ಆದ್ದರಿಂದ ಬಿಳಿಚೆಂಡನ್ನು ಹೆಚ್ಚು ಹೊಳೆಸುವ ಅಗತ್ಯವಿಲ್ಲ. ಆದ್ದರಿಂದ ಅದಕ್ಕೆ ಎಂಜಲು ಲೇಪನ ಮಾಡುವುದು ಬೇಕಿಲ್ಲ’ ಎಂದಿದ್ದಾರೆ.

ಕೊರೊನಾ ವೈದಸ್ ಸೋಂಕು ತಡೆಯುವ ಉದ್ದೇಶಿಂದ ಕ್ರಿಕೆಟ್ ಚೆಂಡಿಗೆ ಎಂಜಲು ಲೇಪನ ಮಾಡುವುದನ್ನು ಐಸಿಸಿಯು ಮಂಗಳವಾರ ತಾತ್ಕಾಲಿಕವಾಗಿ ನಿಷೇಧಿಸಿದೆ. ಆದರೆ, ಬೆವರನ್ನು ಬಳಸಬಹುದು ಎಂದು ಹೇಳಿದೆ.

ADVERTISEMENT

ಅನಿಲ್‌ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿಯು ಈಚೆಗೆ ಎಂಜಲು ಬಳಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಬೇಕು ಎಂದು ಶಿಫಾರಸು ಮಾಡಿತ್ತು. ಈ ಬಗ್ಗೆ ಹಲವು ಕ್ರಿಕೆಟ್ ದಿಗ್ಗಜರು ಪರ–ವಿರೋಧ ಹೇಳಿಕಗಳನ್ನು ನೀಡಿದ್ದರು. ಭಾರತದ ಬಹಳಷ್ಟು ಬೌಲರ್‌ಗಳು ಎಂಜಲು ಬಳಕೆಯನ್ನು ನಿಷೇಧಿಸಬಾರದೆಂದು ವಾದಿಸಿದ್ದರು. ಆದರೆ ಐಸಿಸಿಯು ತನ್ನ ನಿರ್ಧಾರವನ್ನು ಬದಲಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.