ADVERTISEMENT

ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್: ಕರ್ನಾಟಕ ತಂಡಕ್ಕೆ ಮನೀಷ್ ಪಾಂಡೆ ನಾಯಕ

ನ. 4ರಿಂದ 9ರವರೆಗೆ ಗುವಾಹಟಿಯಲ್ಲಿ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 17:20 IST
Last Updated 20 ಅಕ್ಟೋಬರ್ 2021, 17:20 IST
ಮನೀಷ್ ಪಾಂಡೆ
ಮನೀಷ್ ಪಾಂಡೆ   

ಬೆಂಗಳೂರು: ಮನೀಷ್ ಪಾಂಡೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಕರ್ನಾಟಕ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ನವೆಂಬರ್ 4ರಿಂದ 9ರವರೆಗೆ ಗುವಾಹಟಿಯಲ್ಲಿ ಟೂರ್ನಿ ನಡೆಯಲಿದೆ. ಭಾರತ ತಂಡದಲ್ಲಿ ಆಡಿರುವ ಅನುಭವಿಗಳಾದ ಮಯಂಕ್ ಅಗರವಾಲ್, ಕರುಣ್ ನಾಯರ್, ಪ್ರಸಿದ್ಧ ಎಂ. ಕೃಷ್ಣ ಅವರೂ ತಂಡದಲ್ಲಿದ್ದಾರೆ.

ಒಟ್ಟು 20 ಆಟಗಾರರ ತಂಡವನ್ನು ಬುಧವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಕಾರ್ಯದರ್ಶಿ ಸಂತೋಷ್ ಮೆನನ್ ಪ್ರಕಟಿಸಿದ್ದಾರೆ.

ADVERTISEMENT

ತಂಡ ಇಂತಿದೆ: ಮನೀಷ್ ಪಾಂಡೆ (ನಾಯಕ), ಮಯಂಕ್ ಅಗರವಾಲ್ (ಇಬ್ಬರೂ ಜವಾನ್ಸ್‌ ಕ್ಲಬ್), ದೇವದತ್ತ ಪಡಿಕ್ಕಲ್ (ಕೆಂಬ್ರಿಜ್ ಸಿಸಿ), ಕೆ.ವಿ. ಸಿದ್ಧಾರ್ಥ್ (ಕೆನರಾಬ್ಯಾಂಕ್/ಸ್ವಸ್ತಿಕ್ ಯೂನಿಯನ್), ರೋಹನ್ ಕದಂ (ಬ್ಯಾಂಕ್ ಆಫ್ ಬರೋಡ/ಬಿಯುಸಿಸಿ), ಅನಿರುದ್ಧ ಎ ಜೋಶಿ (ಎಸ್‌ಬಿಐ/ವಲ್ಚರ್ಸ್ ಸಿಸಿ), ಅಭಿನವ್ ಮನೋಹರ್ (ಬಿಯುಸಿಸಿ), ಕರುಣ್ ನಾಯರ್ (ವಲ್ಚರ್ಸ್ ಸಿಸಿ), ಬಿ.ಆರ್. ಶರತ್ (ವಿಕೆಟ್‌ಕೀಪರ್; ಆದಾಯ ತೆರಿಗೆ ಇಲಾಖೆ/ಮೌಂಟ್ ಜಾಯ್ ಸಿಸಿ), ನಿಹಾಲ್ ಉಲ್ಲಾಳ (ವಿಕೆಟ್‌ಕೀಪರ್; ರಾಜಾಜಿನಗರ ಕ್ರಿಕೆಟರ್ಸ್), ಶ್ರೇಯಸ್ ಗೋಪಾಲ್ (ಸ್ವಸ್ತಿಕ್ ಯೂನಿಯನ್), ಕೆ. ಗೌತಮ್ (ಬ್ಯಾಂಕ್ ಆಫ್ ಬರೋಡ/ಸ್ವಸ್ತಿಕ್ ಯೂನಿಯನ್), ಜೆ.ಸುಚಿತ್ (ವಲ್ಚರ್ಸ್ ಸಿಸಿ), ಪ್ರವೀಣ ದುಬೆ (ವಲ್ಚರ್ಸ್‌ ಸಿಸಿ), ಕೆ.ಸಿ. ಕಾರ್ಯಪ್ಪ (ಬ್ಯಾಂಕ್ ಆಫ್ ಬರೋಡ/ಜವಾಹರ್ ಎಸ್‌ಸಿ), ಪ್ರಸಿದ್ಧ ಎಂ ಕೃಷ್ಣ (ಮೌಂಟ್ ಜಾಯ್ ಸಿಸಿ), ಪ್ರತೀಕ್ ಜೈನ್ (ಸ್ವಸ್ತಿಕ್ ಯೂನಿಯನ್), ವಿ. ವೈಶಾಖ (ಸೋಷಿಯಲ್ ಕ್ರಿಕೆಟರ್ಸ್), ಎಂ.ಬಿ. ದರ್ಶನ್ (ಮೈಸೂರು ವಲಯ/ವಲ್ಚರ್ಸ ಸಿಸಿ), ವಿದ್ಯಾಧರ್ ಪಾಟೀಲ (ರಾಯಚೂರು ವಲಯ/ಬಿಯುಸಿಸಿ), ಯರೇ ಕೆ ಗೌಡ (ಮುಖ್ಯ ಕೋಚ್), ಎಸ್‌ ಅರವಿಂದ್ (ಬೌಲಿಂಗ್ ಕೋಚ್–ಎಸ್‌ಬಿಐ), ದೀಪಕ್ ಚೌಗುಲೆ (ಫೀಲ್ಡಿಂಗ್ ಕೋಚ್–ಕೆನರಾ ಬ್ಯಾಂಕ್), ಜಾಬ ಪ್ರಭು (ಫಿಸಿಯೊ), ಪಿ. ವೃಷಭ್ (ಸಹಾಯಕ ಫಿಸಿಯೊ), ಎ.ಟಿ. ರಾಜಮಣಿ ಪ್ರಭು (ಸ್ಟ್ರೆಂಥ್–ಕಂಡಿಷನಿಂಗ್), ಸಿ.ಎಂ. ಸೋಮಸುಂದರ್ (ಮಸಾಜ್ ಥೆರಪಿಸ್ಟ್), ಎಂ.ಎಸ್. ವಿನೋದಕುಮಾರ್ (ವಿಡಿಯೊ ಅನಾಲಿಸ್ಟ್), ಅನುತೋಷ್ ಪೋಳ (ಮ್ಯಾನೇಜರ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.