ಬೆಂಗಳೂರು: ರಾಜಸ್ಥಾನದ ವೈದ್ಯರೊಬ್ಬರು ತಮ್ಮ ಕಾರಿಗೆ ನಾಯಿಯೊಂದನ್ನು ಕಟ್ಟಿ, ಅದನ್ನು ಎಳೆದುಕೊಂಡು ಹೋಗಿರುವ ಅಮಾನವೀಯ ಕೃತ್ಯ ವರದಿಯಾಗಿದೆ.
ಡಾ. ರಜನೀಶ್ ಗ್ವಾಲಾ ಎಂಬ ವೈದ್ಯರು ಈ ಕೃತ್ಯ ಎಸಗಿದ್ದು, ಕಾರಿಗೆ ನಾಯಿಯನ್ನು ಕಟ್ಟಿ ಎಳೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ಗಮನಿಸಿ ತಡೆದು ನಿಲ್ಲಿಸಿದ್ದಾರೆ.
ನಾಯಿ ಮನೆಯ ಮುಂಭಾಗದಲ್ಲೇ ಇರುತ್ತಿತ್ತು. ಓಡಿಸಿದರೂ ಮತ್ತೆ ಬಂದು ಬಾಗಿಲ ಬಳಿ ನಿಲ್ಲುತ್ತಿತ್ತು. ಹೀಗಾಗಿ ನಾಯಿಗೆ ಸರಪಳಿ ಬಿಗಿದು ಎಳೆದುಕೊಂಡು ಹೋಗಿರುವುದಾಗಿ ವೈದ್ಯ ರಜನೀಶ್ ತಿಳಿಸಿದ್ದಾರೆ.
ಕಾರಿಗೆ ಕಟ್ಟಿ ಎಳೆದುಕೊಂಡು ಹೋಗಿರುವುದರಿಂದ ನಾಯಿಯ ಕಾಲು ಮುರಿದಿದೆ. ಅದನ್ನು ರಾಜಸ್ಥಾನದ ಡಾಗ್ ಹೋಮ್ ಫೌಂಡೇಶನ್ಗೆ ನೀಡಲಾಗಿದೆ.
ವೈದ್ಯರ ಕೃತ್ಯದ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಜತೆಗೆ ಡಾಗ್ ಹೋಮ್ ಫೌಂಡೇಶನ್ ಸಿಬ್ಬಂದಿ ವೈದ್ಯರ ವಿರುದ್ಧ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.