
ದೀಪ ಹಚ್ಚುವುದು ಹಿಂದೂ ಸಂಪ್ರದಾಯದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ದೇವರಿಗೆ ಪೂಜೆ ಸಲ್ಲಿಸುವಾಗ ದೀಪ ಹಚ್ಚಲಾಗುತ್ತದೆ. ದೀಪ ಹಚ್ಚುವುದರಿಂದ ಸಿಗುವ ಲಾಭಗಳೇನು ಎಂಬುದನ್ನು ನೋಡೋಣ.
ದೇವರಿಗೆ ಪೂಜೆ ಸಲ್ಲಿಸುವಾಗ ಮಣ್ಣಿನಿಂದ ತಯಾರಿಸಿದ ದೀಪ ಹಚ್ಚುವುದರಿಂದ ಶುಭವಾಗುತ್ತದೆ.
ಮಣ್ಣಿನಿಂದ ತಯಾರಿಸಿದ ದೀಪವನ್ನು ಬೆಳಗಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಫಲಿತಾಂಶ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ದೀಪ ಹಚ್ಚುವುದರಿಂದ ಮನೆಯವರಿಗೆ ಇರುವ ತೊಂದರೆ ಹಾಗೂ ದೋಷಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
ದೇವರ ಎಡ ಅಥವಾ ಬಲ ಭಾಗದಲ್ಲಿ ದೀಪವನ್ನು ಹಚ್ಚಿ, ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ.
ದೀಪ ಹಚ್ಚಲು ಹಸುವಿನ ಶುದ್ಧ ತುಪ್ಪ ಬಳಸುವುದರಿಂದ ಒಳಿತಾಗುತ್ತದೆ. ಇದರಿಂದ ಶುಭ ಫಲಗಳು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಅಡುಗೆಗೆ ಉಪಯೋಗಿಸುವ ಎಣ್ಣೆಯನ್ನು ಬಳಸಿ ಕೂಡಾ ದೀಪ ಹಚ್ಚಬಹುದು.
ಎಳ್ಳೆಣ್ಣೆಯಿಂದಲೂ ದೀಪ ಹಚ್ಚಬಹುದು. ಇದು ಶನಿ ದೇವರಿಗೆ ಹೆಚ್ಚು ಸೂಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.