ADVERTISEMENT

ಮಕ್ಕಳಲ್ಲಿ ಏಕಾಗ್ರತೆ ಕೊರತೆಯೇ? ಈ ಮಂತ್ರ ಜಪಿಸಲು ಹೇಳಿ

ಎಲ್.ವಿವೇಕಾನಂದ ಆಚಾರ್ಯ
Published 26 ನವೆಂಬರ್ 2025, 6:09 IST
Last Updated 26 ನವೆಂಬರ್ 2025, 6:09 IST
<div class="paragraphs"><p>ಚಿತ್ರ: ಗೆಟ್ಟಿ</p></div>
   

ಚಿತ್ರ: ಗೆಟ್ಟಿ

ಯಾವುದೇ ಕೆಲಸ ಮಾಡಬೇಕಾದರೆ ಏಕಾಗ್ರತೆ ಬಹಳ ಮುಖ್ಯ. ಏಕಾಗ್ರತೆ ಪಡೆಯಲು ಯಾವ ಮಂತ್ರಗಳನ್ನು ಪಠಿಸಬೇಕು ಎಂಬುದನ್ನು ಜ್ಯೋತಿಷದಲ್ಲಿ ತಿಳಿಸಿದೆ. ಹಾಗಾದರೆ ಏಕಾಗ್ರತೆ ಪಡೆಯಲು ಪಠಿಸಬೇಕಾದ ಮಂತ್ರಗಳು ಯಾವುವು ಎಂಬುದನ್ನು ತಿಳಿಯೋಣ.

  • ಮಕ್ಕಳಲ್ಲಿ ಏಕಾಗ್ರತೆ ಕೊರತೆ ಹೆಚ್ಚಿರುತ್ತದೆ. ಮನಸ್ಸು ಬೇರೆ ಬೇರೆ ವಿಚಾರಗಳ ಕಡೆಗೆ ಆಕರ್ಷಿತಗೊಳ್ಳುತ್ತದೆ. ಅವರು ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳಲು ಏಕಾಗ್ರತೆ ಸಾಧಿಸಬೇಕಾಗುತ್ತದೆ. ಆಗ ಮಂತ್ರ ಪಠಣೆ ಮಾಡುವುದರಿಂದ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬಹುದು.

    ADVERTISEMENT
  • ಒಂದು ವೇಳೆ ಮಕ್ಕಳು ಈ ಮಂತ್ರ ಪಠಿಸದಿದ್ದರೆ, ಅವರ ತಾಯಂದಿರು ಶ್ರದ್ದೆಯಿಂದ ಮಂತ್ರವನ್ನು ಜಪಿಸಿದರೆ ಮಕ್ಕಳಿಗೂ ಒಳಿತಾಗುತ್ತದೆ ಎಂಬ ನಂಬಿಕೆ ಇದೆ.

ಮಂತ್ರ:

’ಓಂ ವೆಂಕಟನಾಥಾಯ ವಿದ್ಮಹೆ ತಿಮ್ಮಣ್ಣಪುತ್ರಾಯ ದಿಮಹಿ ತನ್ನೂ ರಾಘವೇಂದ್ರ ಪ್ರಚೋದಯಾತ್’

‘ಓಂ ಪ್ರಹಲ್ಲಾದಾಯ ವಿದ್ಮಹೆ ವ್ಯಾಸರಾಜಾಯ ಧೀಮಹಿ. ತನ್ಮೂ ರಾಘವೇಂದ್ರ ಪ್ರಚೋ ದಯಾತ್’

  • ಈ ಮಂತ್ರವನ್ನು ಪ್ರತಿನಿತ್ಯ 21 ಬಾರಿ ಜಪಿಸುವುದರಿಂದ ಮನುಷ್ಯರಿಗೆ ಜ್ಞಾನ ವೃದ್ದಿಯಾಗುವುದರ ಜೊತೆಗೆ ಸರಸ್ವತಿಯ ಆಶೀರ್ವಾದ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.