ADVERTISEMENT

ಎಫ್‌ಎಂಸಿಜಿ ವ್ಯಾಪ್ತಿ ಮೀರಿ ವಿಸ್ತರಿಸಿದ ಪತಂಜಲಿ: ಬೆಳವಣಿಗೆ ಮತ್ತು ನಾವೀನ್ಯತೆಯ ಹೊಸ ಯುಗ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 7:10 IST
Last Updated 18 ಏಪ್ರಿಲ್ 2025, 7:10 IST
   

ಪತಂಜಲಿ ಆಯುರ್ವೇದ, ತ್ವರಿತ ಬೇಡಿಕೆಯ ಗ್ರಾಹಕ ಸರಕುಗಳು (ಎಫ್‌ಎಂಸಿಜಿ) ವ್ಯಾಪ್ತಿಯಲ್ಲಿ ಮುಂಚೂಣಿಯಲ್ಲಿದೆ. ಈ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ಪತಂಜಲಿ ಆಯುರ್ವೇದವು ತನ್ನ ಪ್ರಮುಖ ವ್ಯವಹಾರದ ಆಚೆಗೂ ಗಮನಾರ್ಹ ಪ್ರಗತಿ ಸಾಧಿಸಿದೆ. ಕಳೆದ ಹಲವು ವರ್ಷಗಳಿಂದ ಹಲವು ಕೈಗಾರಿಕೆಗಳಾಗಿ ಕಂಪನಿಯು ವೈವಿಧ್ಯಮಯವಾಗಿ ಬೆಳೆದಿದೆ. ಆ ಮೂಲಕ ಮಾರುಕಟ್ಟೆಯನ್ನು ಮರುವ್ಯಾಖ್ಯಾನಿಸಿದೆ ಹಾಗೂ ಗ್ರಾಹಕರಿಗೆ ಹೊಸ ಮಾರ್ಗಗಳನ್ನು ಸೃಷ್ಟಿಸಿದೆ.

ವ್ಯಾವಹಾರ ಕ್ಷೇತ್ರದ ಎಲ್ಲಾ ಸಿದ್ಧಸೂತ್ರಗಳನ್ನೂ ಮೀರಿ ಹೊಳೆವ ದೀಪದಂತೆ ಪತಂಜಲಿಯ ಪಯಣ ಸಾಗುತ್ತಿದೆ. ಆಯುರ್ವೇದ ಉತ್ಪನ್ನಗಳಿಂದ ಆರಂಭಗೊಂಡು, ಸಿದ್ಧ ಆಹಾರ, ಆರೋಗ್ಯ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೂ ಕಂಪನಿ ತನ್ನ ಬಾಹುವನ್ನು ವಿಸ್ತರಿಸಿಕೊಂಡಿದೆ. ನೈಸರ್ಗಿಕ ಉತ್ಪನ್ನಗಳತ್ತ ಕಂಪನಿಯ ಬದ್ಧತೆಯು ಎಲ್ಲಾ ಗಡಿಗಳನ್ನೂ ಮೀರಿ, ಅಸಾಧ್ಯವೆಂಬ ತಾಣಗಳನ್ನೂ ತಲುಪಲು ಸಾಧ್ಯವಾಗಿದೆ.

ಸಮಗ್ರ ಕಾರ್ಯವಿಧಾನವನ್ನು ಅಳವಡಿಸಿಕೊಂಡಿರುವ ಪತಂಜಲಿಯ ವ್ಯವಹಾರ ಕಾರ್ಯವಿಧಾನವು ಉತ್ಪನ್ನಗಳನ್ನು ತಲುಪಿಸುವುದಷ್ಟೇ ಅಲ್ಲದೆ, ಉದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡುವ ಮಹದುದ್ದೇಶ ಹೊಂದಿದೆ. ಕೃಷಿ, ಚಿಲ್ಲರೆ ವ್ಯಾಪಾರ ಕ್ಷೇತ್ರ ಅಥವಾ ಆರೋಗ್ಯ ಕ್ಷೇತ್ರ– ಸುಸ್ಥಿರತೆ ಮತ್ತು ನಾವೀನ್ಯತೆ ಸೃಷ್ಟಿಸುವ ನಿಟ್ಟಿನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸುವತ್ತ ಪತಂಜಲಿ ತನ್ನ ಗಮನ ಕೇಂದ್ರೀಕರಿಸಿದೆ. ಎಲ್ಲವನ್ನೂ ಒಳಗೊಂಡಂತೆ ಭವಿಷ್ಯಕ್ಕಾಗಿ ಮಾರ್ಗಸೂಚಿ ಸಿದ್ಧಪಡಿಸುವತ್ತ ಪತಂಜಲಿ ಗುರಿ ಇಟ್ಟಿದೆ.

ADVERTISEMENT

ಪತಂಜಲಿ ಫುಡ್ಸ್‌ ಲಿಮಿಟೆಡ್‌ ಕಂಪನಿಯು ಭಾರತದ ಆಹಾರ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಪ್ರಕೃತಿದತ್ತವಾದ ಆಹಾರ ಪದಾರ್ಥಗಳ ಬಳಕೆಗೆ ಒತ್ತು ನೀಡುವ ಮೂಲಕ ಆರೋಗ್ಯಯುಕ್ತ ಜೀವನಶೈಲಿಗೆ ಪರ್ಯಾಯವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಆಹಾರ ತಯಾರಿಕೆಯ ಆಲೋಚನೆಯನ್ನೇ ಪತಂಜಲಿ ಬದಲಿಸಿದೆ. ಉತ್ತಮ ಆರೋಗ್ಯಕ್ಕೆ ಒತ್ತು ನೀಡುತ್ತಿರುವ ಭಾರತೀಯರಿಗೆ ಅನುಗುಣವಾಗಿ ಈ ಬದಲಾವಣೆಯಾಗಿದೆ.

ಪತಂಜಲಿಯ ವಿಸ್ತರಣಾ ಕಾರ್ಯತಂತ್ರವು ನಿಖರತೆ, ಗುಣಮಟ್ಟ ಮತ್ತು ಸುಸ್ಥಿರತೆಯನ್ನು ಆಧರಿಸಿದೆ. ಇತರ ಉತ್ಪನ್ನಗಳಿಗೆ ಹೋಲಿಸಿದಲ್ಲಿ, ಪತಂಜಲಿಯು ಸ್ಥಳೀಯ ಸಂಪನ್ಮೂಲಗಳತ್ತ ತನ್ನ ಗಮನ ಕೇಂದ್ರೀಕರಿಸಿದೆ. ಹಣಕ್ಕೆ ಮೌಲ್ಯ ಮತ್ತು ಸ್ವಾವಲಂಬನೆಯನ್ನು ಆಧರಿಸಿದೆ. ಈ ಕಾರ್ಯತಂತ್ರದ ಮೂಲಕ ವಿಶೇಷವಾಗಿ ಗ್ರಾಮೀಣ ಭಾರತವನ್ನು ಒಳಗೊಂಡು ಕಂಪನಿಯು ಗ್ರಾಹಕರೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಂಡಿದೆ.

ಶಿಕ್ಷಣ, ಆರೋಗ್ಯ ಮತ್ತು ಕೃಷಿ ಕ್ಷೇತ್ರದಲ್ಲಿನ ಪತಂಜಲಿ ಪ್ರಯತ್ನಗಳು ಭಾರತದಾದ್ಯಂತ ಜನರ ಜೀವನ ಸುಧಾರಿಸುವ ಬದ್ಧತೆಯನ್ನು ಪ್ರದರ್ಶಿಸಿದೆ. ಲಾಭಕ್ಕಿಂತ ಹೆಚ್ಚಾಗಿ ಸಮಗ್ರ ಅಭಿವೃದ್ಧಿಯ ಮೇಲೆ ತನ್ನ ಗಮನ ಕೇಂದ್ರೀಕರಿಸಿರುವ ಪತಂಜಲಿ, ಯೋಗಕ್ಷೇಮ ಹಾಗೂ ಸುಸ್ಥಿರತೆಯನ್ನು ಗೌರವಿಸುವ ಜೀವನ ವಿಧಾನವನ್ನು ಪ್ರೋತ್ಸಾಹಿಸುತ್ತದೆ.

ಸ್ವಾಸ್ಥ್ಯ ಮತ್ತು ಸುಸ್ಥಿರತೆಯ ವಿಷಯದಲ್ಲಿ ಭಾರತದ ಭವಿಷ್ಯದ ಹಾದಿಯನ್ನು ರೂಪಿಸುವತ್ತ ಪತಂಜಲಿಯ ಹೊಸ ಪ್ರಯತ್ನ ನಡೆಸಿದೆ. ಹಸಿರು ಉತ್ಪಾದನೆ, ಸುಸ್ಥಿರ ಕೃಷಿ ಮತ್ತು ನೈಸರ್ಗಿಕ ಬದುಕನ್ನು ಕೇಂದ್ರೀಕರಿಸಿರುವ ಕಂಪನಿಯು, ಭವಿಷ್ಯದ ಹಸಿರಿಗಾಗಿ ಕಂಪನಿಯು ಜಗತ್ತಿನ ಪಥದತ್ತ ತನ್ನ ಯೋಜನೆ ರೂಪಿಸಿದೆ.

ದಿಗಂತದತ್ತ ಪತಂಜಲಿಯು ತನ್ನ ಯೋಜನೆಗಳನ್ನು ವಿಸ್ತರಿಸುತ್ತಿದೆ. ವಿವಿಧ ಉದ್ಯಮಗಳಲ್ಲಿ ಕಂಪನಿಯು ತನ್ನ ಗಮನಾರ್ಹ ಹೆಜ್ಜೆಗುರುತಗಳನ್ನು ಮೂಡಿಸಿದೆ. ಇದು ಭಾರತದ ಪ್ರತಿಯೊಬ್ಬ ವ್ಯಕ್ತಿಯ ಯೋಗಕ್ಷೇಮವನ್ನು ಸುಧಾರಿಸುವತ್ತ ಕಾರ್ಯಪ್ರವೃತ್ತವಾಗಿದೆ. ಎಫ್‌ಎಂಸಿಜಿ ಕ್ಷೇತ್ರ ಮೀರಿ ಪತಂಜಲಿ ತನ್ನನ್ನು ವಿಸ್ತರಿಸಿಕೊಳ್ಳುತ್ತಿದ್ದು, ಭಾರತದ ವ್ಯಾಪಾರ ಕ್ಷೇತ್ರದಲ್ಲಿ ಸುಸ್ಥಿರತೆ, ಯೋಗಕ್ಷೇಮ ಹಾಗೂ ಸಮುದಾಯ ಅಭಿವೃದ್ಧಿ ಕೇಂದ್ರೀಕರಿಸಿ ಪತಂಜಲಿ ತನ್ನ ವಿಸ್ತರಣಾ ಯೋಜನೆ ಹೊಂದಿದೆ. ಭಾರತದ ವ್ಯವಹಾರ ದಿಗಂತದಲ್ಲಿ ಹೊಸ ಯುಗವನ್ನು ಪ್ರಾರಂಭಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.