ಶಿವಮೊಗ್ಗ: ಜನರು ಜಗಿದು ಎಲ್ಲೆಂದರಲ್ಲಿ ಉಗುಳುವಪರಿಣಾಮಕೊರೊನಾ ವೈರಸ್ ವೇಗವಾಗಿ ಹರಡುವಸಾಧ್ಯತೆ ಇದೆಎಂದು ಉತ್ತರ ಭಾರತದ ಹಲವು ರಾಜ್ಯಗಳು ಗುಟ್ಕಾ, ಪಾನ್ಮಸಾಲ ಉತ್ಪಾದನೆ, ಮಾರಾಟ ನಿಷೇಧಿಸಿವೆ. ಇದು ಅಡಿಕೆ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ.
ಕೊರೊನಾ ನಿರ್ಬಂಧದ ಕಾರಣ ಅಡಿಕೆ ಮಾರುಕಟ್ಟೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಏ.14ರ ನಂತರ ವಹಿವಾಟು ಮತ್ತೆ ಆರಂಭವಾಗಬಹುದು. ಆದರೆ, ರಾಜ್ಯದ ಅಡಿಕೆಗೆ ಉತ್ತರ ಭಾರತವೇ ಪ್ರಮುಖ ಮಾರುಕಟ್ಟೆ. ದೇಶದ ಶೇ 90ರಷ್ಟು ಗುಟ್ಕಾ, ಪಾನ್ಮಸಾಲ ಕಂಪನಿಗಳು,ಕಾರ್ಖಾನೆಗಳುಇರುವುದು ಉತ್ತರದ ರಾಜ್ಯಗಳಲ್ಲೇ. ಕೊರೊನಾ ಭೀತಿಯ ಕಾರಣ ಉತ್ತರ ಪ್ರದೇಶ, ಹರಿಯಾಣ ಮೊದಲಾದ ರಾಜ್ಯಗಳು ದೀರ್ಘಾವಧಿಯವರೆಗೆನಿಷೇಧ ಹೇರಿವೆ.
ದೇಶದಲ್ಲಿ ಬೆಳೆಯುವ ಅಡಿಕೆಯಲ್ಲಿ ರಾಜ್ಯದ ಪ್ರಮಾಣ ಶೇ 60ರಷ್ಟಿದೆ. ರಾಜ್ಯದಲ್ಲಿ ಪ್ರತಿವರ್ಷ 4 ಲಕ್ಷದಿಂದ 5 ಲಕ್ಷ ಟನ್ ಅಡಿಕೆ ಉತ್ಪಾದಿಸಲಾಗುತ್ತಿದೆ. ಕೇರಳದಲ್ಲಿ 30 ಸಾವಿರದಿಂದ 50 ಸಾವಿರ ಟನ್, ಗೋವಾದಲ್ಲಿ 6 ಸಾವಿರದಿಂದ 8 ಸಾವಿರ ಟನ್, ಅಸ್ಸಾಂನಲ್ಲಿ 20 ಸಾವಿರದಿಂದ 25 ಸಾವಿರ ಟನ್ ಹಾಗೂ ಮಹಾರಾಷ್ಟ್ರ ಸೇರಿ ಇತರೆ ಕೆಲವು ರಾಜ್ಯಗಳಲ್ಲಿ ಅಲ್ಪ ಪ್ರಮಾಣದ ಅಡಿಕೆ ಬೆಳೆಯಲಾಗುತ್ತದೆ.
ರಾಜ್ಯದಲ್ಲಿ ಬೆಳೆಯುವ ಶೇ 70ರಷ್ಟುಅಡಿಕೆಯನ್ನು ದಾವಣಗೆರೆ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲೇ ಬೆಳೆಯಲಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ, ತುಮಕೂರು ಜಿಲ್ಲೆಗಳ ಕೆಲ ಭಾಗಗಳಲ್ಲಿ ಅಡಿಕೆ ಬೆಳೆಯಲಾಗುತ್ತದೆ. ರಾಜ್ಯದಲ್ಲಿವಾರ್ಷಿಕ ಸರಾಸರಿ ₹ 20ಸಾವಿರ ಕೋಟಿ ವಹಿವಾಟು ನಡೆಯುತ್ತದೆ.
2014–15ರಲ್ಲಿಕ್ವಿಂಟಲ್ಅಡಿಕೆ ಧಾರಣೆ₹ 1 ಲಕ್ಷದ ಗಡಿ ಮುಟ್ಟಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ ನಂತರ ಮತ್ತೆ ಕುಸಿತ ಕಂಡಿತ್ತು. 2020ರಲ್ಲಿ ಗರಿಷ್ಠ ಧಾರಣೆ ₹ 40 ಸಾವಿರಇತ್ತು.ಬೆಲೆ ಹೆಚ್ಚಳದಲಾಭ ಮಧ್ಯವರ್ತಿಗಳ ಪಾಲಾದ ನಂತರ ಬೆಳೆಗಾರರೇ ಅಧಿಕ ಪ್ರಮಾಣದಲ್ಲಿ ದಾಸ್ತಾನು ಮಾಡುತ್ತಾ ಬಂದಿದ್ದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಮೂರು ವರ್ಷಗಳ ಅಡಿಕೆ ದಾಸ್ತಾನು ಇದೆ. ಬೆಳೆಗಾರರ ಮನೆ, ಸಹಕಾರ ಸಂಘಗಳು, ಮಂಡಿ ವರ್ತಕರ ಬಳಿ 12 ಲಕ್ಷ ಟನ್ ಅಡಿಕೆ ಇರಬಹುದು ಎಂದು ಅಂದಾಜಿಸಲಾಗಿದೆ. ಉತ್ತರ ಭಾರತದಲ್ಲಿ ಗುಟ್ಕಾ, ಪಾನ್ಮಸಾಲ ತಯಾರಿಕೆ ಮೇಲಿನ ನಿರ್ಬಂಧ ಮುಂದುವರಿದರೆ ಅಡಿಕೆ ಮಾರುಕಟ್ಟೆಯಲ್ಲಿ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಲಿದೆ.
ಅಂಕಿ ಅಂಶ
ರಾಜ್ಯ; ಅಡಿಕೆ ಉತ್ಪಾದನೆ (ಟನ್ಗಳಲ್ಲಿ)
ಕರ್ನಾಟಕ; 5 ಲಕ್ಷ
ಕೇರಳ; 50 ಸಾವಿರ
ಅಸ್ಸಾಂ; 25 ಸಾವಿರ
ಗೋವಾ; 8 ಸಾವಿರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.