ಎಐ ಚಿತ್ರ
ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕೇಲವೇ ದಿನಗಳು ಬಾಕಿ ಉಳಿದಿದೆ. ಜನರು ಕೂಡ ಸಂಭ್ರಮ ಸಡಗರದಿಂದ ದೀಪಾವಳಿ ಆಚರಿಸಲು ಎದುರು ನೋಡುತ್ತಿದ್ದಾರೆ. ಜೊತೆಗೆ ದೀಪಾವಳಿಯ ಸಂದರ್ಭದಲ್ಲಿ ಕೆಲವು ವಸ್ತುಗಳನ್ನು ಮನೆಗೆ ತಂದರೆ ಶುಭವಾಗಲಿದೆ ಎಂದು ಜ್ಯೋತಿಷ ಹೇಳುತ್ತದೆ. ಅಷ್ಟಕ್ಕೂ ಆ ವಸ್ತುಗಳು ಯಾವುವು ಎಂದು ನೋಡೋಣ ಬನ್ನಿ.
ಜ್ಯೋತಿಷ ಪ್ರಕಾರ, ಲಕ್ಷ್ಮೀ ದೇವಿಯ ಬೆಳ್ಳಿಯ ಪಾದಗಳನ್ನು ಮನೆಗೆ ತರುವುದು ಶುಭವೆಂದು ಪರಿಗಣಿಸಲಾಗಿದೆ.
ಶುದ್ಧ ಅರಿಶಿನ ಕುಂಕುಮ ಖರೀದಿಸಿ ತರುವುದು ಶುಭ ಎಂದು ಜ್ಯೋತಿಷದಲ್ಲಿ ತಿಳಿಸಿದೆ.
ಹಬ್ಬದ ಸಂದರ್ಭದಲ್ಲಿ ಹೊಸ ಮಣ್ಣಿನ ದೀಪಗಳನ್ನು ಮನೆಗೆ ತಂದು ದಕ್ಷಿಣದ ಕಡೆ ಮುಖ ಮಾಡಿ ಹಚ್ಚುವುದನ್ನು ಶುಭವೆಂದು ಪರಿಗಣಿಸಲಾಗಿದೆ.
ಲಕ್ಷ್ಮೀ, ಗಣೇಶನ ಚಿನ್ನ ಅಥವಾ ಬೆಳ್ಳಿಯ ವಿಗ್ರಹಗಳನ್ನು ಮನೆಗೆ ತರುವುದು ಶುಭ ಎಂದು ಪರಿಗಣಿಸಲಾಗುತ್ತದೆ. (ಕನಿಷ್ಠ ಫೋಟೋಗಳನ್ನಾದರೂ ತರುವುದು ಮಂಗಳಕರ)
ದೀಪಾವಳಿಯಂದು ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ವಸ್ತುಗಳನ್ನು ಖರೀದಿಸುವುದು ಉತ್ತಮ ಎಂದು ನಂಬಲಾಗಿದೆ.
ಲಕ್ಷ್ಮೀಗೆ ಸಕ್ಕರೆ ಮಿಠಾಯಿಂದ ನೈವೇದ್ಯ ಮಾಡುವುದು ಶುಭ ಎಂದು ಹೇಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.