

ಬೆಂಗಳೂರು: ಅರ್ಬನ್ ವಿಂಗ್ಸ್ ಫೌಂಡೇಶನ್ನಿಂದ ಅಂಜನಾಪುರ ವಾರ್ಡ್ ನಲ್ಲಿನ ಕೆಂಬತ್ತಹಳ್ಳಿ ಕೆರೆ ಸ್ಚಚ್ಛತಾ ಅಭಿಯಾನ ನಡೆಯಲಿದೆ.
‘ಪ್ಲಾಸ್ಟಿಕ್ ಮುಕ್ತ ಕೆರೆ, ಪಕ್ಷಿಗಳಿಗೆ ಮತ್ತು ಜಲಚರಗಳಿಗೆ ಸುರಕ್ಷಿತ ವಾತಾವರಣ ನಿರ್ಮಿಸುವುದು. ಮುಂದಿನ ಪೀಳಿಗೆಗಾಗಿ ಇಂದೇ ಕೆರೆಯನ್ನು ಸಂರಕ್ಷಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ’ ಎಂದು ಅರ್ಬನ್ ವಿಂಗ್ಸ್ ಫೌಂಡೇಶನ್ ತಿಳಿಸಿದೆ.
ಈ ಸ್ಚಚ್ಛತಾ ಅಭಿಯಾನವು ಮಾರ್ಚ್ 1ರ ಭಾನುವಾರದಂದು ಬೆಳಿಗ್ಗೆ 6.30ರಿಂದ ಬೆಳಿಗ್ಗೆ 8.30ವರೆಗೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ: urbanwingsfoundation@gmail.com , 63637 69768
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.