ADVERTISEMENT

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಬಿರುಸಿನ ಮಳೆ, ಮೈದುಂಬಿ ಹರಿಯುತ್ತಿದೆ ತುಂಗಾ ನದಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 7:41 IST
Last Updated 3 ಜುಲೈ 2022, 7:41 IST
ಶೃಂಗೇರಿ ಭಾಗದಲ್ಲಿ ತುಂಗಾ ನದಿ ಹರಿವು
ಶೃಂಗೇರಿ ಭಾಗದಲ್ಲಿ ತುಂಗಾ ನದಿ ಹರಿವು   

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ರಾತ್ರಿ ಬಿರುಸಾಗಿ ಮಳೆಯಾಗಿದೆ. ನದಿ, ಹಳ್ಳ, ಝರಿಗಳು ಮೈದುಂಬಿಕೊಂಡಿವೆ.

ತುಂಗಾ ನದಿ ಮೈದುಂಬಿಕೊಂಡು ಹರಿಯುತ್ತಿದೆ. ಗಿರಿ ಶ್ರೇಣಿ ಭಾಗದಲ್ಲಿ ಹಳ್ಳ, ಝರಿಗಳಲ್ಲಿ ಹರಿವಿನ ಪ್ರಮಾಣ ಹೆಚ್ಚಾಗಿದೆ.

ಕೊಪ್ಪ, ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಕಿಗ್ಗಾ 17.4, ಶೃಂಗೇರಿ– 136. 2, ಕೆರೆಕಟ್ಟೆ– 12.9, ಜಯಪುರ– 12.3, ಬಸ್ರೀಕಟ್ಟೆ– 9.7, ಕೊಟ್ಟಿಗೆಹಾರ– 8.2 ಸೆಂ.ಮೀ ಮಳೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.