ADVERTISEMENT

ಚಿತ್ರದುರ್ಗ: ಸಿದ್ದರಾಮಯ್ಯ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 15:58 IST
Last Updated 28 ನವೆಂಬರ್ 2021, 15:58 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಚಿತ್ರದುರ್ಗ: ಹವಮಾನ ವೈಪರಿತ್ಯದ ಕಾರಣಕ್ಕೆ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ ಮಾಡಿದ್ದರಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಸ್ತೆ ಮೂಲಕ ಮೈಸೂರಿಗೆ ಪ್ರಯಾಣ ಬೆಳೆಸಿದರು.

ವಿಧಾನಪರಿಷತ್‌ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿಯ ಪರ ಪ್ರಚಾರ ಮುಗಿಸಿ ಮೈಸೂರಿಗೆ ಮರಳಲು ಸಿದ್ದರಾಮಯ್ಯ ಅವರು ಹೆಲಿಕಾಪ್ಟರ್‌ ಏರಿದ್ದರು. ಭಾನುವಾರ ಸಂಜೆ 4ಕ್ಕೆ ಹಾರಾಟ ಆರಂಭಿಸಿದ ಹೆಲಿಕಾಪ್ಟರ್‌ ಕೆಲವೇ ನಿಮಿಷಗಳಲ್ಲಿ ಎಸ್‌ಜೆಎಂ ವಿದ್ಯಾಪೀಠದ ಹೆಲಿಪ್ಯಾಡ್‌ಗೆ ಮರಳಿತು.

‘ಹೆಲಿಕಾಪ್ಟರ್‌ ಹಾರಾಟ ಆರಂಭಿಸಿ ಒಂದಷ್ಟು ದೂರ ಸಾಗಿತ್ತು. ಕೆಳಗೆ ಇಳಿಯಲು ಮೈಸೂರಿನಲ್ಲಿ ವಾತಾವರಣ ಪೂರಕವಾಗಿಲ್ಲ ಎಂಬ ಮಾಹಿತಿ ಪೈಲೆಟ್‌ಗೆ ಸಿಕ್ಕಿತು. ಹೀಗಾಗಿ, ಹೆಲಿಕಾಪ್ಟರ್‌ ಚಿತ್ರದುರ್ಗಕ್ಕೆ ಮರಳಿತು. ಸಿದ್ದರಾಮಯ್ಯ ಅವರು ಕಾಫಿ ಸೇವಿಸಿ ರಸ್ತೆ ಮೂಲಕ ಪ್ರಯಾಣ ಬೆಳೆಸಿದರು. ಹೆಲಿಕಾಪ್ಟರ್‌ ಸೋಮವಾರ ಬೆಳಿಗ್ಗೆ ತೆರಳಲಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.