ಮಂಗಳೂರು: ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದ ನಡುವೆಯೂ ಕೆಎಸ್ಆರ್ಟಿಸಿ ಮಂಗಳೂರು ವಿಭಾಗದಿಂದ 15 ಬಸ್ಗಳನ್ನು ಗುರುವಾರ ಬೆಳಿಗ್ಗೆ ಬಿಡಲಾಗಿದೆ.
ನೌಕರರ ಮುಷ್ಕರದ ಪರಿಣಾಮ ಬುಧವಾರ ಯಾವುದೇ ಬಸ್ ಸಂಚಾರ ನಡೆಸಲಿಲ್ಲ. ಈ ನಡುವೆ ವಿಭಾಗದ ಅಧಿಕಾರಿಗಳು ನೌಕರರ ಸತತ ಮನವೊಲಿಕೆ ನಡೆಸಿ, 15 ಬಸ್ಗಳನ್ನು ಗುರುವಾರ ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
‘ನೌಕರರ ಮನವೊಲಿಕೆ ಮಾಡಿ 15 ಬಸ್ಗಳ ಸಂಚಾರ ಆರಂಭಿಸಿದ್ದೇವೆ. ಸಂಜೆ ವೇಳೆಗೆ ಇನ್ನಷ್ಟು ನೌಕರರು ಸೇವೆಗೆ ಬರುವ ವಿಶ್ವಾಸ ಇದೆ’ ಎಂದು ಕೆಎಸ್ಆರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಎಸ್. ಅರುಣ್ ‘ಪ್ರಜಾವಾಣಿ’ಗೆ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಮಾರ್ಗಗಳಲ್ಲಿ ಖಾಸಗಿ ಬಸ್ಗಳ ಸಂಚಾರವಿದ್ದು, ಇಲ್ಲದ ಮಾರ್ಗಗಳಲ್ಲಿ ಖಾಸಗಿ ಬಸ್, ಕಾಂಟ್ರ್ಯಾಕ್ಟ್ ಕ್ಯಾರೇಜ್, ಮ್ಯಾಕ್ಸಿ ಕ್ಯಾಬ್ ಮತ್ತಿತರ ವಾಹನಗ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೆ, ಹೊರ ಜಿಲ್ಲೆ ಹಾಗೂ ಕೆಲವು ಮಾರ್ಗದ ಪ್ರಯಾಣಿಕರು ಸೂಕ್ತ ವ್ಯವಸ್ಥೆ ಇಲ್ಲದೇ ಪರದಾಡಬೇಕಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.