ADVERTISEMENT

ಅರಸೀಕೆರೆ | ಆಕಸ್ಮಿಕ ಬೆಂಕಿ: 60 ಚೀಲ ಶುಂಠಿ ನಾಶ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 14:18 IST
Last Updated 8 ಮಾರ್ಚ್ 2024, 14:18 IST
   

ಅರಸೀಕೆರೆ: ಬೆಂಕಿ ತಗುಲಿ ಯಾದಾಪುರ ಶಿವಣ್ಣ ಎಂಬುವರಿಗೆ ಸೇರಿದ 60 ಚೀಲ ಶುಂಠಿ ನಾಶವಾಗಿರುವ ಘಟನೆ ತಾಲ್ಲೂಕಿನ ಕೆರೆಕೋಡಿಹಳ್ಳಿ ಹಿಂಭಾಗ ರಾಷ್ಟ್ರೀಯ ಹೆದ್ದಾರಿ ಸಮೀಪ ಶುಕ್ರವಾರ ನಡೆದಿದೆ.

ಒಂದು ಹೆಕ್ಟೇರ್ ಜಮೀನಿನಲ್ಲಿ ಶುಂಠಿ ಬೆಳೆಯುವ ಉದ್ದೇಶದಿಂದ ರೈತ ಶಿವಣ್ಣ 60 ಚೀಲ ಶುಂಠಿಯನ್ನು ಬೀಜೋಪಚಾರ ಮಾಡಿ ಇಟ್ಟಿದ್ದರು. ಅದರ ಪಕ್ಕದಲ್ಲೇ ಹೊದಿಕೆಗೆ ತಂದಿರುವ ಹುಲ್ಲನ್ನು ಸಹ ಇಟ್ಟಿದ್ದರು. ಜಮೀನಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಶಾಮಕದಳದವರು ಬೆಂಕಿ ನಂದಿಸಿದ್ದಾರೆ. ಶುಂಠಿ ಬಹುತೇಕ ಹಾಳಾಗಿದೆ ಎಂದು ಸ್ಥಳೀಯ ರೈತರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT