ADVERTISEMENT

ಸಹಕಾರ ಸಂಘದ ಸೌಲಭ್ಯ ಪಡೆಯಲು ನ್ಯಾಯಾಧೀಶರಾದ ಅನುಪಮಾ ಡಿ. ಸಲಹೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 5:06 IST
Last Updated 5 ಫೆಬ್ರುವರಿ 2021, 5:06 IST
ತಾಲ್ಲೂಕು ವಕೀಲರ ಸಂಘದ ಕ್ರೆಡಿಟ್‌ ಕೋಆಪರೇಟಿವ್ ಸೊಸೈಟಿಯ ಮಳಿಗೆಯನ್ನು ನ್ಯಾಯಾಧೀಶರಾದ ಅನುಪಮಾ ಡಿ. ಉದ್ಘಾಟಿಸಿದರು
ತಾಲ್ಲೂಕು ವಕೀಲರ ಸಂಘದ ಕ್ರೆಡಿಟ್‌ ಕೋಆಪರೇಟಿವ್ ಸೊಸೈಟಿಯ ಮಳಿಗೆಯನ್ನು ನ್ಯಾಯಾಧೀಶರಾದ ಅನುಪಮಾ ಡಿ. ಉದ್ಘಾಟಿಸಿದರು   

ಮಾಲೂರು: ವಕೀಲರು ಮತ್ತು ಕಕ್ಷಿದಾರರು ನ್ಯಾಯಾಲಯ ಆವರಣದಲ್ಲಿ ಆರಂಭವಾಗಿರುವ ವಕೀಲರ ಸಂಘದ ಕ್ರೆಡಿಟ್‌ ಕೋಆಪರೇಟಿವ್ ಸೊಸೈಟಿಯಲ್ಲಿ ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನ್ಯಾಯಾಧೀಶರಾದ ಅನುಪಮಾ ಡಿ. ತಿಳಿಸಿದರು.

ಪಟ್ಟಣದ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ತಾಲ್ಲೂಕು ವಕೀಲರ ಸಂಘದ ಕ್ರೆಡಿಟ್‌ ಕೋಆಪರೇಟಿವ್ ಸೊಸೈಟಿಯ ಮಳಿಗೆ ಉದ್ಘಾಟಿಸಿ ಅವರು
ಮಾತನಾಡಿದರು.

ವಕೀಲರು ಮತ್ತು ಕಕ್ಷಿದಾರರು ನ್ಯಾಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸಲು ಬೇಕಾದಂತಹ ಸ್ಟಾಂಪ್ ಪೇಪರ್ ಹಾಗೂ ಇತರೆ ಲೇಖನ ಸಾಮಗ್ರಿಗಳನ್ನು ಬೆಂಗಳೂರು ಅಥವಾ ಕೋಲಾರಕ್ಕೆ ಹೋಗಿ ತರಬೇಕಾಗಿತ್ತು. ಗ್ರಾಹಕರು ತಮ್ಮ ಕಕ್ಷಿದಾರರಿಗೆ ಅನುಕೂಲವಾಗುವಂತೆ ವಕೀಲರ ಸಂಘವು ಸೊಸೈಟಿ ಆರಂಭಿಸಿದೆ. ಇಲ್ಲಿಯೇ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದರು.

ADVERTISEMENT

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಬಿ. ಕೃಷ್ಣಪ್ಪ ಮಾತನಾಡಿದರು.

ನ್ಯಾಯಾಧೀಶರಾದ ಲೋಕೇಶ್, ಪಾರ್ವತಮ್ಮ, ವಕೀಲರ ಸಂಘದ ಉಪಾಧ್ಯಕ್ಷ ಅಮರ್ ನಾರಾಯಣ್, ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್, ಜಂಟಿ ಕಾರ್ಯದರ್ಶಿ ಅಂಗಸಗಿರಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.