ADVERTISEMENT

ನಾನು IPL ಆಟಗಾರನಿದ್ದಂತೆ, ಅವಕಾಶ ಯಾವ ಕಡೆ ಸಿಗುತ್ತದೋ ಅಲ್ಲಿರುತ್ತೇನೆ: ರೆಡ್ಡಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 7:17 IST
Last Updated 12 ಮಾರ್ಚ್ 2024, 7:17 IST
<div class="paragraphs"><p>ಶಾಸಕ ಜನಾರ್ದನ ರೆಡ್ಡಿ</p></div>

ಶಾಸಕ ಜನಾರ್ದನ ರೆಡ್ಡಿ

   

ಆನೆಗೊಂದಿ (ಗಂಗಾವತಿ): ಆನೆಗೊಂದಿ ಉತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ ‘ನಾನು ಐಪಿಎಲ್‌ ಆಟಗಾರನಿದ್ದಂತೆ. ಅವಕಾಶ ಯಾವ ಕಡೆ ಸಿಗುತ್ತದೆಯೇ ಅಲ್ಲಿರುತ್ತೇನೆ’ ಎಂದರು.

ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ರೆಡ್ಡಿ ಕಾಂಗ್ರೆಸ್‌ ಪರವಾಗಿ ಮತ ಚಲಾಯಿಸಿದ್ದಾರೆ ಎನ್ನುವ ಮಾತು ಕೂಡ ವೇದಿಕೆಯಲ್ಲಿದ್ದ ಸಂಸದ ಸಂಗಣ್ಣ ಕರಡಿ ಮತ್ತು ಶಾಸಕ ದೊಡ್ಡನಗೌಡ ಪಾಟೀಲ ಅವರಿಂದ ಬಂತು.

ADVERTISEMENT

ಈ ವಿಷಯದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ರೆಡ್ಡಿ ’ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗೆ ₹100 ಕೋಟಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಪ್ರತಿ ವರ್ಷವೂ ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ಅವರೊಡನೆ ಒಂದು ಹೆಜ್ಜೆ ಹಾಕಿರಬಹುದು. ನನ್ನವು ಇನ್ನೂ ಎರಡು ಹೆಜ್ಜೆಗಳಿದ್ದು ಅವು ನಿಮ್ಮ (ಬಿಜೆಪಿ) ಪರವಾಗಿ ಬರಬೇಕಾದರೆ ಲೋಕಸಭಾ ಚುನಾವಣೆ ಘೋಷಣೆಗೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅಂಜನಾದ್ರಿಗೆ ₹2 ಸಾವಿರ ಕೋಟಿ ಘೋಷಿಸಬೇಕು’ ಎಂದು ಬಿಜೆಪಿಗೆ ಆಮಿಷವೊಡ್ಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.