ಕೊಪ್ಪಳ: ಸಿದ್ದೇಶ್ವರ ಸ್ವಾಮೀಜಿ ಯಾವುದೇ ಪಂಥಗಳಿಲ್ಲದ ಸಂತ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಕಂಬನಿ ಮಿಡಿದಿದ್ದಾರೆ.
ಸಿದ್ದೇಶ್ವರ ಸ್ವಾಮೀಜಿ ಯಾವುದೇ ಪಂಥಗಳಿಲ್ಲದ, ಗ್ರಂಥಕ್ಕೆ ಅಂಟಿಕೊಳ್ಳದ, ಜನರ ಹೃದಯ ಗ್ರಂಥಗಳಲ್ಲಿ ಉಳಿದ ಸಂತ ವಸಂತ ಸಿದ್ದೇಶ್ವರ ಅಪ್ಪಾಜಿ ಎಂದಿದ್ದಾರೆ.
ಅವರು ಸುಳಿದೆಡೆಯಲ್ಲಿ ಸುಯಿಧಾನ ಸಮಾಧಾನಗಳು, ನಿಂತ ನಿಲುವು ಸದಾ ಸತ್ಯದ ಒಲವು, ಮಾಯ ಮುಟ್ಟದ ಕಾಯ, ಭ್ರಮೆ ಇಲ್ಲದ ಭಾವ, ಲೋಕಾಂತವನ್ನು ಪ್ರೀತಿಸಿ, ತಾವು ಏಕಾಂತವಾಗಿ ಉಳಿದವರು. ಚಿಂತೆಗಳ ಮಧ್ಯೆ ನಿಶ್ಚಿಂತನಾಗಿ ಬದುಕುವ ಜೀವನ್ಮುಕ್ತಾವಸ್ತರು ಎಂದು ಹೇಳಿದ್ದಾರೆ.
ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.