ADVERTISEMENT

ರಾಮನಗರ | ಮಾರುಕಟ್ಟೆಯಲ್ಲಿ ಜನಜಂಗುಳಿ: ಎಂದಿನಂತೆ ವಾಹನ ಸಂಚಾರ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 4:57 IST
Last Updated 8 ಜನವರಿ 2022, 4:57 IST
ರಾಮನಗರದಲ್ಲಿ ವಾಹನ ಸಂಚಾರ ಎಂದನಂತೆ ಆರಂಭವಾಗಿದೆ
ರಾಮನಗರದಲ್ಲಿ ವಾಹನ ಸಂಚಾರ ಎಂದನಂತೆ ಆರಂಭವಾಗಿದೆ   

ರಾಮನಗರ: ವಾರಾಂತ್ಯದ ಕರ್ಫ್ಯೂ‌ ನಡುವೆಯೂ‌ ಶನಿವಾರ ಬೆಳಿಗ್ಗೆ ಜನಜೀವನ ಎಂದಿನಂತೆ ಆರಂಭಗೊಂಡಿತು.

ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಜನರು ನೆರೆದಿದ್ದರು. ಕೆಎಸ್‌ಆರ್‌ಟಿಸಿ ಬಸ್ ಗಳು ಸಂಚರಿಸುತ್ತಿದ್ದು, ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.‌ ಖಾಸಗಿ ವಾಹನಗಳ ಸಂಚಾರಕ್ಕೆ ಅಡ್ಡಿ ಇರಲಿಲ್ಲ.

ದಿನಬಳಕೆ ವಸ್ತುಗಳ‌ ಮಾರಾಟ, ಹಾಲು, ಮಾಂಸ ಮಾರಾಟಕ್ಕೆ ಅವಕಾಶ ಇದ್ದು, ಹೋಟೆಲ್ ಗಳಲ್ಲಿ ಪಾರ್ಸಲ್ ಸೇವೆಗೆ ಅವಕಾಶ ಇದೆ. ಬೇರೆ ಅಂಗಡಿಗಳ ಬಾಗಿಲು‌ ತೆರೆಯದಂತೆ ಪೊಲೀಸರು ಧ್ವನಿವರ್ಧಕಗಳ‌ ಮೂಲಕ ಮನವಿ ಮಾಡುತ್ತಿದ್ದಾರೆ.

ADVERTISEMENT
ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಜನರು ನೆರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.