ADVERTISEMENT

ತುಮಕೂರು| ಮಾನವೀಯತೆ, ಅನುಕಂಪ ಮರೆಯದಿರಿ: ಡಾ.ಸಲೀಮುಲ್ಲಾ ಖಾನ್‌

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 5:40 IST
Last Updated 9 ಫೆಬ್ರುವರಿ 2026, 5:40 IST
ತುಮಕೂರಿನ ಶ್ರೀದೇವಿ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶನಿವಾರ ಪದವಿ ಪ್ರದಾನ ಸಮಾರಂಭ ನಡೆಯಿತು. ಡಾ.ಸಲೀಮುಲ್ಲಾ ಖಾನ್‌, ಎನ್.ಎಸ್.ಪ್ರಕಾಶ್‌, ಡಾ.ಎಂ.ಆರ್‌.ಹುಲಿನಾಯ್ಕರ್‌, ಡಾ.ಎಂ.ರಮಣ್‌, ಎಂ.ಎಸ್.ಪಾಟೀಲ್‌, ಎಂ.ಅಂಬಿಕಾ, ಡಾ.ಲಾವಣ್ಯ ಇತರರು ಹಾಜರಿದ್ದರು
ತುಮಕೂರಿನ ಶ್ರೀದೇವಿ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶನಿವಾರ ಪದವಿ ಪ್ರದಾನ ಸಮಾರಂಭ ನಡೆಯಿತು. ಡಾ.ಸಲೀಮುಲ್ಲಾ ಖಾನ್‌, ಎನ್.ಎಸ್.ಪ್ರಕಾಶ್‌, ಡಾ.ಎಂ.ಆರ್‌.ಹುಲಿನಾಯ್ಕರ್‌, ಡಾ.ಎಂ.ರಮಣ್‌, ಎಂ.ಎಸ್.ಪಾಟೀಲ್‌, ಎಂ.ಅಂಬಿಕಾ, ಡಾ.ಲಾವಣ್ಯ ಇತರರು ಹಾಜರಿದ್ದರು   

ತುಮಕೂರು: ಜಗತ್ತಿನ ಆರೋಗ್ಯ, ಭವಿಷ್ಯ ಔಷಧ ವಿಜ್ಞಾನದ ಮೇಲೆ ಅವಲಂಬಿತವಾಗಿದೆ ಎಂದು ಮಂಗಳೂರಿನ ಪಿ.ಎ.ಕಾಲೇಜ್‌ ಆಫ್‌ ಫಾರ್ಮಸಿ ಪ್ರಾಂಶುಪಾಲ ಡಾ.ಸಲೀಮುಲ್ಲಾ ಖಾನ್‌ ಹೇಳಿದರು.

ನಗರದ ಶ್ರೀದೇವಿ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಪದವಿ ಪ್ರದಾನ ಸಮಾರಂಭ, ಹೊಸ ಕೋರ್ಸ್‌ಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಷ್ಟು ಎತ್ತರಕ್ಕೆ ಬೆಳೆದರೂ ಮಾನವೀಯತೆ, ಅನುಕಂಪ, ಕರುಣೆ ಮತ್ತು ಸಾಮಾಜಿಕ ಕಾಳಜಿ ಮರೆಯಬಾರದು ಎಂದರು.

ADVERTISEMENT

ಶ್ರೀದೇವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಆರ್‌.ಹುಲಿನಾಯ್ಕರ್‌, ‘ಔಷಧ ವಿಜ್ಞಾನ ಬಹಳ ವೇಗವಾಗಿ ಬೆಳೆಯುತ್ತಿದೆ. ಹೃದಯ ಸಂಬಂಧಿ ಕಾಯಿಲೆಗಳಿಗೆ 500ಕ್ಕೂ ಹೆಚ್ಚು ಔಷಧಿಗಳು ದೊರೆಯುತ್ತಿದೆ. ಹೆಚ್ಚಿನ ಜ್ಞಾನ, ಕೌಶಲ ರೂಢಿಸಿಕೊಂಡರೆ ಬದುಕು ಹಸನಾಗುತ್ತದೆ’ ಎಂದು ತಿಳಿಸಿದರು.

ವಿಜ್ಞಾನಿ ಎನ್.ಎಸ್.ಪ್ರಕಾಶ್‌, ಶ್ರೀದೇವಿ ವೈದ್ಯಕೀಯ ನಿರ್ದೇಶಕ ಡಾ.ಎಂ.ರಮಣ್‌, ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್‌, ಚಾರಿಟಬಲ್‌ ಟ್ರಸ್ಟ್‌ನ ಟ್ರಸ್ಟಿಗಳಾದ ಎಂ.ಅಂಬಿಕಾ, ಡಾ.ಲಾವಣ್ಯ, ಔಷಧ ವಿಜ್ಞಾನ ಮಹಾವಿದ್ಯಾಲಯದ ನಿರ್ದೇಶಕ ಬಿ.ಗೋಪಾಲಕೃಷ್ಣ, ಪ್ರಾಂಶುಪಾಲ ಶಿವಕುಮಾರ್‌ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.