ADVERTISEMENT

ಸಂಸದ ಎ.ನಾರಾಯಣಸ್ವಾಮಿ ಕಾಡುಗೊಲ್ಲರ ಹಟ್ಟಿ ಪ್ರವೇಶ, ಜನರಿಂದ ಸ್ವಾಗತ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 7:30 IST
Last Updated 23 ಸೆಪ್ಟೆಂಬರ್ 2019, 7:30 IST
ಸಂಸದ ಎ.ನಾರಾಯಣಸ್ವಾಮಿ ಅವರು ಕಾಡುಗೊಲ್ಲರ ಹಟ್ಟಿ ಪ್ರವೇಶ ಮಾದಿದ ಸಂದರ್ಭದಲ್ಲಿ ಸ್ವಾಗತಿಸಲಾಯಿತು. 
ಸಂಸದ ಎ.ನಾರಾಯಣಸ್ವಾಮಿ ಅವರು ಕಾಡುಗೊಲ್ಲರ ಹಟ್ಟಿ ಪ್ರವೇಶ ಮಾದಿದ ಸಂದರ್ಭದಲ್ಲಿ ಸ್ವಾಗತಿಸಲಾಯಿತು.    

ಪಾವಗಡ(ತುಮಕೂರು): ಸಂಸದ ಎ.ನಾರಾಯಣಸ್ವಾಮಿ ಅವರು ಸೋಮವಾರ ಪೆಮ್ಮನಹಳ್ಳಿಯ ಕಾಡುಗೊಲ್ಲರ ಹಟ್ಟಿ ಪ್ರವೇಶ(ಪುರ ಪ್ರವೇಶ)ಮಾಡಿದರು. ಹಟ್ಟಿಗೆ ಬಂದ ಅವರನ್ನು ಜನ ಸ್ವಾಗತಿಸಿದರು.

ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಕೆಲವು ಸ್ಥಳೀಯರು ಕೈಜೋಡಿಸಿದ್ದಾರೆ.

ಹಟ್ಟಿಯ ಪ್ರವೇಶದಲ್ಲಿ ಸ್ವಾಗತಕ್ಕೆ ಬಾಳೆ ಕಂದುಗಳನ್ನು, ಮಾವಿನ ತೋರಣಗಳನ್ನು ಕಟ್ಟಲಾಗಿದೆ. ಸೇವಂತಿ ಹೂಗಳನ್ನು ಪೋಣಿಸಿ ಅಲ್ಲಲ್ಲಿನ ಹಾದಿಯನ್ನು ಅಲಂಕರಿಸಲಾಗಿತ್ತು.

ADVERTISEMENT
ಸ್ವಾಗತಕ್ಕೆ ಸೇರಿದ್ದ ಜನ

ಸ್ಥಳೀಯ ಮುಖಂಡರು ಸ್ವಾಗತಕ್ಕೆ ಬ್ಯಾನರ್‌ಗಳನ್ನು ಕಟ್ಟಿದ್ದಾರೆ. ಹಟ್ಟಿಯ ಮಧ್ಯದಲ್ಲಿನ ಸಿದ್ದೇಶ್ವರ-ಈರಣ್ಣ- ತಿಮ್ಮಪ್ಪ ದೇವಾಲಯದ ಆವರಣದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಒಬ್ಬರು ಡಿವೈಎಸ್ಪಿ, 2 ಪಿಎಸ್ಐ, 2 ಎಸ್ಐ, 31 ಕಾನ್‌ಸ್ಟೆಬಲ್ ಒಳಗೊಂಡ ಪೊಲೀಸ್ ಪಡೆ ನಿಯೋಜಿಸಲಾಗಿದೆ.

ಪೂರ್ಣಕುಂಭ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.