ADVERTISEMENT

ಭಟ್ಕಳ: ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ‘ನೀರಜ್ ಹೆಸರಿನ ಎಲ್ಲರಿಗೂ ಉಚಿತ ಊಟ’

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 4:07 IST
Last Updated 10 ಆಗಸ್ಟ್ 2021, 4:07 IST
ಶಿರಾಲಿ ವೆಂಕಟಾಪುರದಲ್ಲಿರುವ ತಾಮ್ರ ಹೋಟೆಲ್
ಶಿರಾಲಿ ವೆಂಕಟಾಪುರದಲ್ಲಿರುವ ತಾಮ್ರ ಹೋಟೆಲ್   

ಭಟ್ಕಳ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಸದ್ಯ ದೇಶದ ಹೀರೊ. ಅವರಿಗೆ ನಾಗರಿಕರು ಬಗೆಬಗೆಯಾಗಿ ಹಾರೈಸಿದ್ದಾರೆ. ಇತ್ತ ತಾಲ್ಲೂಕಿನ ಶಿರಾಲಿ ವೆಂಕಟಾಪುರದಲ್ಲಿರುವ ತಾಮ್ರ ಹೋಟೆಲ್‌ನ ಮಾಲೀಕರು ನೀರಜ್ ಹೆಸರಿರುವ ಎಲ್ಲರಿಗೂ ಉಚಿತ ಊಟ ನೀಡುವುದಾಗಿ ಘೋಷಿಸಿದ್ದಾರೆ.

ಈಚೆಗೆ ಆರಂಭಗೊಂಡ ತ್ರಾಮ ಹೊಟೇಲ್ ಮಾಲೀಕ ಆಶೀಶ್ನಾಯಕ, ‘ಭಾರತಕ್ಕೆ ಕೀರ್ತಿ ತಂದ ನೀರಜ್ ಚೋಪ್ರಾ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಆಗಸ್ಟ್ 15ರ ವರೆಗೆ ಈ ವ್ಯವಸ್ಥೆ ಮುಂದುವರಿಯಲಿದೆ’ ಎಂದರು.

ADVERTISEMENT

‘ಚಿನ್ನ ಗೆದ್ದಿರುವ ನೀರಜ್ ಅದ್ವಿತೀಯ ಸಾಧನೆಗೆ ಮನಸೋತಿದ್ದೇನೆ. ನೀರಜ್ ಹೆಸರಿನ ಗ್ರಾಹಕರು ನಮ್ಮ ಹೋಟೆಲ್‌ಗೆ ಬಂದು ಅವರಿಗೆ ಇಷ್ಟವಾದ ಯಾವುದೇ ಆಹಾರ ಪಡೆದರೂ ಉಚಿತ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.