ADVERTISEMENT

ಪಂಜಾಬ್: ಅಕ್ಷಯ್ ನಟನೆಯ ‘ಬೆಲ್ ಬಾಟಮ್' ಪ್ರದರ್ಶನ ಖಂಡಿಸಿ ರೈತರಿಂದ ಪ್ರತಿಭಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಆಗಸ್ಟ್ 2021, 9:07 IST
Last Updated 27 ಆಗಸ್ಟ್ 2021, 9:07 IST
ಅಕ್ಷಯ್‌ ಕುಮಾರ್
ಅಕ್ಷಯ್‌ ಕುಮಾರ್    

ಚಂಡೀಗಡ: ಬಾಲಿವುಡ್ ನಟ ಅಕ್ಷಯ್‌ ಕುಮಾರ್ ಅಭಿನಯದ ‘ಬೆಲ್ ಬಾಟಮ್’ ಚಿತ್ರದ ಪ್ರದರ್ಶನವನ್ನು ನಿಲ್ಲಿಸುವಂತೆ ಆಗ್ರಹಿಸಿ ರೈತ ಸಂಘಟನೆಗಳ ಮುಖಂಡರು ಪಂಜಾಬ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಇತ್ತೀಚಿಗೆ ರೈತರ ಪ್ರತಿಭಟನೆ ಕುರಿತು ಮಾತನಾಡಿದ್ದ ಅಕ್ಷಯ್​ ಕುಮಾರ್, ‘ಆ ಪ್ರತಿಭಟನೆ ಕೇವಲ ಒಂದು ಪ್ರಚಾರವಷ್ಟೆ’ ಎಂದು ಟೀಕಿಸಿದ್ದರು. ಇದೀಗ ಅಕ್ಷಯ್‌ ಹೇಳಿಕೆ ಖಂಡಿಸಿರುವ ರೈತ ಮುಖಂಡರು ಪಂಜಾಬ್‌ನಲ್ಲಿ ‘ಬೆಲ್‌ ಬಾಟಮ್‌’ ಚಿತ್ರದ ಪ್ರದರ್ಶನವನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

‘ನಮ್ಮ ರಾಜ್ಯದಲ್ಲಿ ಅಕ್ಷಯ್‌ ಕುಮಾರ್ ಅವರಿಗೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆದರೆ, ಅವರು ರೈತರ ಆಂದೋಲನದ ಪರವಾಗಿ ಇದುವರೆಗೆ ಒಂದೇ ಒಂದು ಮಾತನ್ನೂ ಆಡಲಿಲ್ಲ. ಇದು ನಮಗೆ ಬೇಸರ ತರಿಸಿದೆ’ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ADVERTISEMENT

‘ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಅಕ್ಷಯ್ ಅಭಿನಯದ ಚಿತ್ರಗಳ ಪ್ರದರ್ಶನವನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು’ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.