ADVERTISEMENT

ರಾಘವೇಂದ್ರ ಗುರುವೈಭವೋತ್ಸವ: ರಿಷಭ್ ಶೆಟ್ಟಿ, ಜಗ್ಗೇಶ್ ಸೇರಿ ಗಣ್ಯರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 3:58 IST
Last Updated 25 ಫೆಬ್ರುವರಿ 2026, 3:58 IST
<div class="paragraphs"><p>ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಸುಬುಧೇಂದ್ರ ತೀರ್ಥರು ಚಲನಚಿತ್ರ ನಿರ್ದೇಶಕ ರಿಷಭ್  ಶೆಟ್ಟಿ ಅವರನ್ನು ಸನ್ಮಾನಿಸಿದರು</p></div>

ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಸುಬುಧೇಂದ್ರ ತೀರ್ಥರು ಚಲನಚಿತ್ರ ನಿರ್ದೇಶಕ ರಿಷಭ್ ಶೆಟ್ಟಿ ಅವರನ್ನು ಸನ್ಮಾನಿಸಿದರು

   

ಮಂತ್ರಾಲಯ (ರಾಯಚೂರು): ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಒಂದು ವಾರ ನಡೆದ ಗುರುವೈಭವೋತ್ಸವ ಕಾರ್ಯಕ್ರಮಗಳು ಮಂಗಳವಾರ ರಾತ್ರಿ ಮುಕ್ತಾಯಗೊಂಡವು.

ಚಲನಚಿತ್ರ ನಿರ್ದೇಶಕರಾದ ರಿಷಭ್‌ ಶೆಟ್ಟಿ, ಜಗ್ಗೇಶ್, ಲಕ್ಷ್ಮೀನಾರಾಯಣ ಪ್ರೊಡಕ್ಷನ್‌ನ ರಘು ಭಟ್ ಸೇರಿದಂತೆ ಕನ್ನಡ ಚಲನಚಿತ್ರೋದ್ಯಮದ ಗಣ್ಯರು ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಯರ ದರ್ಶನ ಪಡೆದರು.

ADVERTISEMENT

ಶ್ರೀ ಪ್ರಹ್ಲಾದ ರಾಜರ ಪಲ್ಲಕಿ ಉತ್ಸವದ ಭವ್ಯ ಮೆರವಣಿಗೆಯನ್ನು ಪವಿತ್ರ ಪರಿಮಳ ತೀರ್ಥ ಪುಷ್ಕರಣಿಗೆ ವಿಧ್ಯುಕ್ತವಾಗಿ ಕರೆದೊಯ್ಯಲಾಯಿತು. ಸುಬುಧೇಂದ್ರ ತೀರ್ಥರು ವೇದ ಪಠಣ ಮತ್ತು ಭಕ್ತಿ ಭಾವವೊಂದಿಗೆ ತೆಪ್ಪೋತ್ಸವ ನಡೆಸಿದರು.

ನಂತರ ಸುಗುಣ ಭಟ್ ನಿರ್ಮಿಸಿದ ಮತ್ತು ರಘು ಭಟ್ - ಟಿಎನ್ಐಟಿ ನಿರ್ದೇಶಿಸಿದ ‘ಶ್ರೀ ರಾಯರ ದರ್ಶನ’ ಆಲ್ಬಮ್ ಹಾಡಿನ ಟೀಸರ್ ಅನ್ನು ಎಚ್.ಎಚ್. ​​ಶ್ರೀ ಸ್ವಾಮೀಜಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ, ಶ್ರೀಗಳು ಡಾ. ಸಿ.ಎನ್. ಅಶ್ವಥ್ ನಾರಾಯಣ, ರಿಷಭ್‌ ಶೆಟ್ಟಿ, ಜಗ್ಗೇಶ್, ಕೈಗಾರಿಕೋದ್ಯಮಿ ಎಚ್.ಎಸ್. ರಾಘವೇಂದ್ರ ರಾವ್, ಸೆಲ್ವಿ ದಾಮೋದರ್, ಬಿಜೆಪಿ ಮುಖಂಡ ಸುಬ್ಬಣ್ಣ, ರಘು ಭಟ್ ಅವರನ್ನು ಸನ್ಮಾನಿಸಿದರು.

ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.