ADVERTISEMENT

ನನ್ನ ವಿಚ್ಛೇದಿತ ಪತ್ನಿಯ ಆರೋಪದಲ್ಲಿ ಹುರುಳಿಲ್ಲ: ಶಿಲ್ಪಾ ಶೆಟ್ಟಿ ಪತಿ ರಾಜ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜೂನ್ 2021, 9:05 IST
Last Updated 12 ಜೂನ್ 2021, 9:05 IST
ಶಿಲ್ಪಾ ಶೆಟ್ಟಿ –ರಾಜ್‌ ಕುಂದ್ರ ( ಚಿತ್ರ: ರಾಜ್‌ ಕುಂದ್ರ ಇನ್‌ಸ್ಟಾಗ್ರಾಂ)
ಶಿಲ್ಪಾ ಶೆಟ್ಟಿ –ರಾಜ್‌ ಕುಂದ್ರ ( ಚಿತ್ರ: ರಾಜ್‌ ಕುಂದ್ರ ಇನ್‌ಸ್ಟಾಗ್ರಾಂ)   

‘ನಟಿ ಶಿಲ್ಪಾ ಶೆಟ್ಟಿಯೇ ನಮ್ಮ ದಾಂಪತ್ಯ ಜೀವನ ಹಾಳು ಮಾಡಿದರು ಎಂದು ವಿಚ್ಛೇದಿತಪತ್ನಿ ಕವಿತಾ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ‘ ಎಂದು ರಾಜ್‌ ಕುಂದ್ರ ಹೇಳಿದ್ದಾರೆ.

ಖಾಸಗಿ ಟಿ.ವಿ ಚಾನೆಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಶಿಲ್ಪಾ ಶೆಟ್ಟಿ ವಿರುದ್ಧ ಕವಿತಾ ಗಂಭೀರ ಆರೋಪ ಮಾಡಿದ್ದರು. ಈ ಸಂದರ್ಶನದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಬಾಲಿವುಡ್‌ ಸುದ್ದಿಗಳನ್ನು ಆನ್‌ಲೈನ್‌ನಲ್ಲಿ ಬಿತ್ತರಿಸುವ ‘ಪಿಂಕ್‌ ವಿಲ್ಲಾ‘ಗೆ ನೀಡಿರುವ ಸಂದರ್ಶನದಲ್ಲಿ ರಾಜ್‌ ಕುಂದ್ರ ಸ್ಪಷ್ಟನೆ ನೀಡಿದ್ದು, ಕವಿತಾ ಆರೋಪದಲ್ಲಿ ಹುರುಳಿಲ್ಲ ಎಂದಿದ್ದಾರೆ.

ಶಿಲ್ಪಾ ಶೆಟ್ಟಿ ಅವರನ್ನು ವಿವಾಹವಾಗುವುದಕ್ಕೂ ಮುಂಚೆ ರಾಜ್‌ ಕುಂದ್ರ ಕವಿತಾರನ್ನು ಮದುವೆಯಾಗಿ ಲಂಡನ್‌ನಲ್ಲಿ ನೆಲೆಸಿದ್ದರು. ಕವಿತಾಗೆ 2006ರಲ್ಲಿವಿಚ್ಛೇದನನೀಡಿ 2009ರಲ್ಲಿ ಶಿಲ್ಪಾ ಶೆಟ್ಟಿಯನ್ನು ಮದುವೆಯಾದರು.

ಕವಿತಾ ಆರೋಪದ ಬಗ್ಗೆ ಮಾತನಾಡಿರುವ ರಾಜ್‌ ಕುಂದ್ರ, ಕವಿತಾ ಹಣಕ್ಕಾಗಿ ಆತ್ಮವನ್ನೇ ಮಾರಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಆ ವಿಡಿಯೊ ಸಂದರ್ಶನಕ್ಕಾಗಿ ಕವಿತಾ ಸಾಕಷ್ಟು ಹಣವನ್ನು ಪಡೆದಿದ್ದಾರೆ. ಈ ಬಗ್ಗೆ ಪತ್ರಿಕೆಗಳು ಬ್ಯಾಂಕ್‌ ದಾಖಲೆಗಳ ಸಮೇತ ವರದಿ ಮಾಡಿರುವುದು ಎಲ್ಲರಿಗೂ ತಿಳಿದಿದೆ ಎಂದು ರಾಜ್‌ ಕುಂದ್ರ ಹೇಳಿದ್ದಾರೆ.

ನಾವು ಲಂಡನ್‌ನಲ್ಲಿ ನೆಲೆಸಿದ್ದಾಗ ಕವಿತಾ ಸದಾ ನಮ್ಮ ಮನೆಯವರ ಜೊತೆ ಜಗಳ ಮಾಡುತ್ತಿದ್ದಳು. ಅಲ್ಲದೇ ನನ್ನ ತಂಗಿಯ ಗಂಡನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ರಾಜ್‌ ಕುಂದ್ರಾ ಆರೋಪಿಸಿದ್ದಾರೆ. ಅದು ಮುಗಿದು ಹೋದ ಕಥೆ, ಈಗ ಆರೋಪ ಮಾಡುವುದರಲ್ಲಿ ಯಾವ ಅರ್ಥವಿದೆ? ಪ್ರಚಾರ ಹಾಗೂ ಹಣಕ್ಕಾಗಿ ಕವಿತಾ ಈ ರೀತಿ ಮಾಡುತ್ತಿದ್ದಾರೆ ಎಂದು ರಾಜ್‌ ಕುಂದ್ರ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.