ನಟ ಪವನ್ ಕಲ್ಯಾಣ್ ಅವರದ್ದು ಎರಡು ದೋಣಿಯ ಪಯಣ. ಅವರಿಗೆ ರಾಜಕೀಯದ ಮೇಲೆ ಕಡುಮೋಹ. ಹಾಗೆಂದು ಅವರು ಸಿನಿಮಾದ ಸೆಳೆತದಿಂದಲೂ ದೂರ ಸರಿದಿಲ್ಲ. ರಾಜಕಾರಣದ ಬಿಡುವಿನ ನಡುವೆಯೇ ಅವರು ‘ವಕೀಲ್ ಸಾಬ್’ ಸಿನಿಮಾ ಮೂಲಕ ಮತ್ತೆ ಬಣ್ಣದಲೋಕದ ಹಾದಿಗೆ ಹೊರಳಿದ್ದಾರೆ. ಸದ್ಯಕ್ಕೆ ಕೊರೊನಾ ಸೋಂಕಿನ ಭೀತಿಯಿಂದಾಗಿ ಈ ಚಿತ್ರದ ಶೂಟಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇದು ಹಿಂದಿಯ ‘ಪಿಂಕ್’ ಚಿತ್ರದ ತೆಲುಗು ರಿಮೇಕ್.
ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ವೇಣು ಶ್ರೀರಾಮ್. ಈ ಚಿತ್ರಕ್ಕೆ ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು. ಶ್ರುತಿ ಹಾಸನ್, ಇಲಿಯಾನಾ, ಲಾವಣ್ಯಾ ತ್ರಿಪಾಠಿ ಅವರು ಪವನ್ ಕಲ್ಯಾಣ್ ಜೊತೆಗೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿತ್ತು. ಕೊನೆಗೆ, ಚಿತ್ರತಂಡ ಶ್ರುತಿ ಹಾಸನ್ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿದೆ ಎಂಬ ಸುದ್ದಿ ಹೊರಬಿದ್ದಿದೆ.
ಇದನ್ನೂ ಓದಿ...ನಟನೆಗೆ ಮರಳಿದ ಶ್ರುತಿ ಹಾಸನ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.