ADVERTISEMENT

ಮುಂಗಾರು ಮಳೆಗೆ ರಾಷ್ಟ್ರದಲ್ಲಿ 1,900 ಬಲಿ

ಪಿಟಿಐ
Published 4 ಅಕ್ಟೋಬರ್ 2019, 20:15 IST
Last Updated 4 ಅಕ್ಟೋಬರ್ 2019, 20:15 IST
ಪಟ್ನಾದ ಪ್ರವಾಹಪೀಡಿತ ಪ್ರದೇಶದ ಜನರಿಗೆ ಸ್ವಯಂಸೇವಕರು ಶುಕ್ರವಾರ ಆಹಾರ ಸಾಮಗ್ರಿ ವಿತರಿಸಿದರು
ಪಟ್ನಾದ ಪ್ರವಾಹಪೀಡಿತ ಪ್ರದೇಶದ ಜನರಿಗೆ ಸ್ವಯಂಸೇವಕರು ಶುಕ್ರವಾರ ಆಹಾರ ಸಾಮಗ್ರಿ ವಿತರಿಸಿದರು   

ನವದೆಹಲಿ: ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ಉಂಟಾದ ಪ್ರವಾಹ ಸ್ಥಿತಿಯಿಂದಾಗಿ ಒಟ್ಟಾರೆ 1,874 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ; 46 ಮಂದಿ ನಾಪತ್ತೆಯಾಗಿದ್ದಾರೆ. 25 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದಾಗಿ ಸಂಕಷ್ಟ ಅನುಭವಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಮಹಾ ಮಳೆಗೆ ಮಹಾರಾಷ್ಟ್ರದಲ್ಲಿ 382 ಮಂದಿ ಪ್ರಾಣ ಕಳೆದುಕೊಂಡಿದ್ದರೆ, ಪಶ್ಚಿಮ ಬಂಗಾಳದಲ್ಲಿ 227 ಮಂದಿ ಸತ್ತಿದ್ದಾರೆ. ದೇಶದ 357 ಜಿಲ್ಲೆಗಳಲ್ಲಿ ಭೂಕುಸಿತಗಳು ಸಂಭವಿಸಿವೆ. 738 ಮಂದಿ ಗಾಯಗೊಂಡಿದ್ದು, 20 ಸಾವಿರ ಪ್ರಾಣಿಗಳು ಸತ್ತಿವೆ. 1.09 ಲಕ್ಷ ಮನೆಗಳು ಕುಸಿದಿದ್ದರೆ 2.05 ಲಕ್ಷ ಮನೆಗಳಿಗೆ ಭಾಗಶಃ ಹಾನಿಯಾಗಿದೆ. 14.14 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆಪ್ಟೆಂಬರ್‌ 30ಕ್ಕೆ ಮುಂಗಾರು ಋತು ಪೂರ್ಣಗೊಂಡಿದೆ. ಆದರೂ ದೇಶದ ಕೆಲವು ಭಾಗಗಳಲ್ಲಿ ಈಗಲೂ ಭಾರಿ ಮಳೆಯಾಗುತ್ತಿದ್ದು ಪ್ರವಾಹ ಸ್ಥಿತಿ ಎದುರಾಗಿದೆ.

ADVERTISEMENT

1994ರ ಬಳಿಕ ಈ ವರ್ಷ ದೇಶದಾದ್ಯಂತ ಗರಿಷ್ಠ ಪ್ರಮಾಣದ ಮಳೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.