ADVERTISEMENT

ರೈತರ ಪ್ರತಿಭಟನೆ ಕಾವನ್ನು ಸರ್ಕಾರ ಸಾಂಕ್ರಾಮಿಕದತ್ತ ತಿರುಗಿಸುತ್ತಿದೆ: ಚಿದಂಬರಂ

ಏಜೆನ್ಸೀಸ್
Published 28 ಮೇ 2021, 8:16 IST
Last Updated 28 ಮೇ 2021, 8:16 IST
ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ
ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ   

ನವದೆಹಲಿ: ರೈತರ ಪ್ರತಿಭಟನೆಯ ಕಾವನ್ನು ತನ್ನ ಪರವಾಗಿ ತಿರುಗಿಸಿಕೊಳ್ಳಲು ಸದ್ಯದ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದಿರುವ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ, ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕರೆ ನೀಡಿದ್ದಾರೆ.

ಸರ್ಕಾರದ ಈ ನಡೆಯು ಸಾಂಕ್ರಾಮಿಕ ರೋಗದ ಮಧ್ಯೆಯು ಆಂದೋಲನವನ್ನು ದೀರ್ಘಕಾಲದವರೆಗೆ ಇರುವಂತೆ ಮಾಡುತ್ತಿದೆ. ಈ ಸರ್ಕಾರವು ನಿಜವಾಗಿಯೂ ಜನರ ಸೇವಕರಾಗಿದ್ದರೆ ಸಾರ್ವಜನಿಕರ ಅಭಿಪ್ರಾಯದತ್ತ ಗಮನ ಹರಿಸಬೇಕು. 'ರೈತರ ಪ್ರತಿಭಟನೆಯು 6 ತಿಂಗಳು ಪೂರೈಸಿರುವಂತೆಯೇ, ಸರ್ಕಾರವು ಸಾಂಕ್ರಾಮಿಕ ರೋಗವನ್ನು ಮುಂದಿಟ್ಟುಕೊಂಡು ತನ್ನ ಪರವಾಗಿ ಗಮನ ತಿರುಗಿಸಲು ಬಳಸುತ್ತಿದೆ' ಎಂದು ಅವರು ಹೇಳಿದರು.

ಸಾಂಕ್ರಾಮಿಕ ರೋಗದ ಮಧ್ಯೆ ವಿವಾದಾತ್ಮಕ ಕೃಷಿ ಕಾನೂನುಗಳನ್ನು ದೀರ್ಘಗೊಳಿಸುತ್ತಿರುವುದು ಸ್ಪಷ್ಟವಾಗಿದೆ. ವಿವಾದಾತ್ಮಕ ಕಾನೂನುಗಳನ್ನು ಬದಲಾಯಿಸಲು ರೈತರು ನಿರ್ಧರಿಸಿದರೆ, ಸರ್ಕಾರ ಹಠಮಾರಿ ಧೋರಣೆ ಅನುಸರಿಸುತ್ತಿದೆ. ಸರ್ಕಾರವು ಜನರ ಸೇವಕನಾಗಿದ್ದರೆ, ಅದು ಸಾರ್ವಜನಿಕರ ಅಭಿಪ್ರಾಯವನ್ನು ಗಮನಿಸಬೇಕು, ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಮತ್ತು ಹೊಸ ಸಮಾಲೋಚನೆಗಳನ್ನು ಪ್ರಾರಂಭಿಸಬೇಕು' ಎಂದಿದ್ದಾರೆ.

ADVERTISEMENT

ಕಳೆದ ನವೆಂಬರ್ 26ರಿಂದಲೂ ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೇ 16 ರಂದು, ಗಾಜಿಯಾಬಾದ್‌ನ ರೈತರು ಪ್ರತಿಭಟನೆಯು ಆರು ತಿಂಗಳ ಪೂರ್ಣಗೊಂಡಿದ್ದಕ್ಕಾಗಿ 'ಕರಾಳ ದಿನ'ವನ್ನಾಗಿ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.