ADVERTISEMENT

ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಈಸುದಾನ್‌ ಗಢವಿ ಕಂಭಾಲಿಯಾದಿಂದ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2022, 15:30 IST
Last Updated 13 ನವೆಂಬರ್ 2022, 15:30 IST
   

ಅಹಮದಾಬಾದ್‌:ಗುಜರಾತ್‌ ಮುಖ್ಯಮಂತ್ರಿ ಹುದ್ದೆಯ ಎಎಪಿ ಅಭ್ಯರ್ಥಿ ಈಸುದಾನ್‌ ಗಢವಿ ಅವರು ತಮ್ಮ ತವರು ಜಿಲ್ಲೆ ದೇವಭೂಮಿ ದ್ವಾರಕಾದ ಕಂಭಾಲಿಯಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಭಾನುವಾರ ಘೋಷಿಸಿದ್ದಾರೆ.

‘ರೈತರು, ನಿರುದ್ಯೋಗಿ ಯುವಜನರು, ಮಹಿಳೆಯರು ಉದ್ಯಮಿಗಳ ಪರವಾಗಿ ಇಷ್ಟು ವರ್ಷ ಧ್ವನಿ ಎತ್ತುತ್ತಿದ್ದ ಈಸುದಾನ್‌ ಗಢವಿ ಅವರು ಕಂಭಾಲಿಯಾದಿಂದ ಸ್ಪರ್ಧಿಸಲಿದ್ದಾರೆ. ಕೃಷ್ಣನ ಪವಿತ್ರ ನಾಡಿಗೆ ಹೊಸ ಮತ್ತು ಉತ್ತಮವಾದ ಮುಖ್ಯಮಂತ್ರಿ ದೊರೆಯಲಿದ್ದಾರೆ’ ಎಂದು ಕೇಜ್ರಿವಾಲ್‌ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಈ ಟ್ವೀಟ್‌ಗೆ ಗಢವಿ ಅವರು ನೀಡಿದ ಪ್ರತಿಕ್ರಿಯೆ ಹೀಗಿದೆ: ‘ನೀವು ಮತ್ತು ಗುಜರಾತ್‌ನ ಜನರು ಇಟ್ಟಿರುವ ವಿಶ್ವಾಸದಿಂದಾಗಿ ಕೊನೆಯುಸಿರಿನ ತನಕ ಗುಜರಾತ್‌ ಜನರ ಸೇವೆ ಮಾಡುತ್ತೇನೆ’. ಸುದ್ದಿವಾಹಿನಿಯಲ್ಲಿ ನಿರೂಪಕರಾಗಿದ್ದ ಗಢವಿ ಅವರನ್ನು ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ನ. 4ರಂದು ಘೋಷಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.