ADVERTISEMENT

SIR | 7ರಂದು ‘ಇಂಡಿಯಾ’ ಸಭೆ: 8ಕ್ಕೆ ಚುನಾವಣಾ ಆಯೋಗದತ್ತ ಪ್ರತಿಭಟನಾ ಮೆರವಣಿಗೆ

ಪಿಟಿಐ
Published 3 ಆಗಸ್ಟ್ 2025, 16:06 IST
Last Updated 3 ಆಗಸ್ಟ್ 2025, 16:06 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್ಐಆರ್‌) ವಿರುದ್ಧ ಕೈಗೊಂಡಿರುವ ಹೋರಾಟದ ಕಾರ್ಯತಂತ್ರ ಕುರಿತು ಚರ್ಚಿಸಲು ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ದ ನಾಯಕರು ಆಗಸ್ಟ್‌ 7ರಂದು ಸಭೆ ನಡೆಸುವ ನಿರೀಕ್ಷೆ ಇದೆ ಎಂದು ಮೂಲಗಳು ಭಾನುವಾರ ಹೇಳಿವೆ.

‘ಎಸ್‌ಐಆರ್‌’ ಪ್ರಕ್ರಿಯೆ ವಿರೋಧಿಸಿ ಆಗಸ್ಟ್‌ 8ರಂದು ಚುನಾವಣಾ ಆಯೋಗದ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯೋಜಿಸಿದ್ದಾರೆ ಎಂದೂ ಮೂಲಗಳು ಹೇಳಿವೆ.

 ‘ಇಂಡಿಯಾ’ ನಾಯಕರು ಆಗಸ್ಟ್‌ 7ರಂದು ಔತಣಕೂಟ ಹಮ್ಮಿಕೊಂಡಿದ್ದು, ಅದೇ ವೇಳೆ ನಡೆಯುವ ಸಭೆಯಲ್ಲಿ, ಹೋರಾಟದ ರೂಪುರೇಷೆ ಕುರಿತು ಚರ್ಚಿಸುವರು ಎಂದು ಇವೇ ಮೂಲಗಳು ತಿಳಿಸಿವೆ.

ADVERTISEMENT

ಉಪರಾಷ್ಟ್ರಪತಿ ಚುನಾವಣೆ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಮೈತ್ರಿಕೂಟದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ವಿಪಕ್ಷಗಳ ಅನೇಕ ನಾಯಕರು ಒಲವು ಹೊಂದಿರುವ ಕಾರಣ, ಸಭೆ ಕುತೂಹಲ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.