ADVERTISEMENT

ಗುಜರಾತ್ ಕರಾವಳಿ: ಮುಳುಗುತ್ತಿದ್ದ ಮೀನುಗಾರಿಕಾ ದೋಣಿಯಿಂದ ಆರು ಮಂದಿ ರಕ್ಷಣೆ

ಪಿಟಿಐ
Published 9 ಮಾರ್ಚ್ 2023, 12:49 IST
Last Updated 9 ಮಾರ್ಚ್ 2023, 12:49 IST
.
.   

ಅಹಮದಾಬಾದ್‌: ಗುಜರಾತ್ ಕರಾವಳಿ ತೀರದಲ್ಲಿ ಮೀನುಗಾರಿಕೆ ತೆರಳಿದ್ದ ದೋಣಿಯೊಳಕ್ಕೆ ನೀರು ನುಗ್ಗಿ ಅಪಾಯದಲ್ಲಿ ಸಿಲುಕಿದ್ದ ಆರು ಮಂದಿಯನ್ನು ಕರಾವಳಿ ರಕ್ಷಣಾ ಪಡೆ ರಕ್ಷಿಸಿದೆ.

ಕರಾವಳಿ ತೀರದಿಂದ 80 ಕಿ.ಮೀ. ದೂರದಲ್ಲಿ ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಅಪಾಯದ ಕರೆ ಬಂದ ತಕ್ಷಣ ರಕ್ಷಣೆಗೆ ಧಾವಿಸಿದ ‘ಆರುಷ್’ ಹೆಸರಿನ ನೌಕೆ ಸಂಕಷ್ಟದಲ್ಲಿ ಇದ್ದವರನ್ನು ರಕ್ಷಿಸಿತು ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.

ದೋಣಿಯ ಮೀನು ಸಂಗ್ರಹಾಗಾರದಲ್ಲಿ ತೂತು ಬಿದ್ದುದರಿಂದ ನೀರು ಒಳಗೆ ನುಗ್ಗಿತ್ತು. ರಕ್ಷಣಾ ಸಿಬ್ಬಂದಿ ಮೊದಲಿಗೆ ಸಬ್‌ಮರ್ಸಿಬಲ್‌ ಪಂಪ್‌ ಬಳಸಿ ನೀರು ಹೊರಗೆ ಹಾಕಿ, ತೂತನ್ನು ಬಂದ್‌ ಮಾಡಿ ದೋಣಿ ಮತ್ತೆ ತೇಲುವಂತೆ ಮಾಡಿದರು ಎಂದು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.