ADVERTISEMENT

ಇಂಡಿಯನ್‌–2 ಸೆಟ್‌ ದುರಂತ: ಚೆನ್ನೈ ಪೊಲೀಸರ ಮುಂದೆ ಹಾಜರಾದ ಕಮಲ್ ಹಾಸನ್

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 6:00 IST
Last Updated 3 ಮಾರ್ಚ್ 2020, 6:00 IST
ತಮಿಳು ನಟ ಕಮಲ್‌ ಹಾಸನ್‌
ತಮಿಳು ನಟ ಕಮಲ್‌ ಹಾಸನ್‌   

ಚೆನ್ನೈ: ಸೆಟ್‌ ತಯಾರಿಸುವ ವೇಳೆ ಕ್ರೇನ್‌ ಕುಸಿದ ಪರಿಣಾಮ ಮೂವರು ಸಹಾಯ ನಿರ್ದೇಶಕರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟ ಕಮಲ್ ಹಾಸನ್ ಇಂದು ಚೆನ್ನೈ ಪೊಲೀಸರ ಮುಂದೆ ಹಾಜರಾಗಿದ್ದಾರೆ.

ಇಂಡಿಯನ್‌–2 ಚಿತ್ರಕ್ಕೆ ಚೆನ್ನೈ ಹೊರಹೊಲಯದಲ್ಲಿರುವ ಇವಿಪಿ ಫಿಲ್ಮ್ ಸಿಟಿಯಲ್ಲಿ ಸೆಟ್‌ ತಯಾರಿಸಲಾಗುತ್ತಿತ್ತು. ಆ ಸಂದರ್ಭ ಕ್ರೇನ್‌ ಕುಸಿದು ಮೂವರು ಸಹಾಯಕ ನಿರ್ದೇಶಕರು ಮೃತಪಟ್ಟಿದ್ದರು. 9 ಜನರಿಗೆ ಗಾಯಗಳಾಗಿದ್ದವು.

ಅಪಘಾತ ಸಂಭವಿಸಿದಾಗ ಕಮಲ್ ಹಾಸನ್ ಸೆಟ್‌ ತಯಾರಿಸುವ ಸ್ಥಳದಲ್ಲಿಹಾಜರಿರಲಿಲ್ಲ ಎಂದು ತಿಳಿದುಬಂದಿತ್ತು.

ADVERTISEMENT

ಕಮಲ್‌ ಹಾಸನ್‌ ಸೇರಿದಂತೆ ಚಿತ್ರಕ್ಕೆ ಸಂಬಂಧಪಟ್ಟ ಹಲವರ ಮೇಲೆ ಚೆನ್ನೈ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದರು.

ಚಿತ್ರದ ನಿರ್ದೇಶಕ ಶಂಕರ್ ಅವರನ್ನು ಚೆನ್ನೈ ಪೊಲೀಸರು ಕಳೆದ ವಾರ ವಿಚಾರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.