ADVERTISEMENT

ರಾಜ್ಯದ ಜನರು ಮಿಜೋರಾಂಗೆ ತೆರಳದಿರಿ ಎಂದ ಅಸ್ಸಾಂ ಸರ್ಕಾರ; ಕಾಂಗ್ರೆಸ್ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2021, 4:50 IST
Last Updated 30 ಜುಲೈ 2021, 4:50 IST
ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ
ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ   

ನವದೆಹಲಿ: ಗಡಿ ವಿವಾದದ ಹಿನ್ನಲೆಯಲ್ಲಿ ತನ್ನ ನೆರೆಯ ರಾಜ್ಯ ಮಿಜೋರಾಂಗೆ ತೆರಳದಂತೆ ರಾಜ್ಯದ ಜನರಿಗೆ ಸೂಚನೆ ನೀಡಿರುವ ಅಸ್ಸಾಂ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಕಿಡಿ ಕಾರಿದೆ.

ಮಿಜೋರಾಂಜತೆಗಿನಅಂತರ ರಾಜ್ಯ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಂಘರ್ಷದ ವೇಳೆ ಆರು ಪೊಲೀಸರು ಸೇರಿದಂತೆ ಒಟ್ಟು ಏಳು ಮಂದಿ ಸಾವಿಗೀಡಾಗಿದ್ದರು.‌ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದನ್ನುಗಮನದಲ್ಲಿರಿಸಿಅಸ್ಸಾಂ ಸರ್ಕಾರ ಜನರಿಗೆ ಸೂಚನೆ ನೀಡಿದೆ.

ಈ ಸಂಬಂಧಟ್ವೀಟ್‌ ಮಾಡಿರುವ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಧಿಕಾರದಲ್ಲಿ ಮುಂದುವರಿಯಬೇಕೇ? ಎಂದು ಪ್ರಶ್ನಿಸಿದ್ದಾರೆ.

ADVERTISEMENT

ʼದೇಶದ ಇತಿಹಾದಲ್ಲೇ ಇದು ಅತ್ಯಂತ ಮುಜುಗರದ ದಿನ! ದೇಶದ ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಯಾಣಿಸಲು ಸಾಧ್ಯವಾಗದಿರುವಾಗ, ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಅವರಹುದ್ದೆಗಳಲ್ಲಿ ಮುಂದುವರಿಯುವ ಹಕ್ಕು ಇದೆಯೇ? ಮೋದಿಇದ್ದರೆ ಇವೆಲ್ಲ ಸಾಧ್ಯʼ‌ ಎಂದು ಕುಟುಕಿದ್ದಾರೆ.

ʼಅಸ್ಸಾಂ ಜನರ ವೈಯಕ್ತಿಕ ಸುರಕ್ಷತೆಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗುವುದನ್ನು ಸಹಿಸಲಾಗದು.ಹೀಗಾಗಿ ಸದ್ಯದ ಸ್ಥಿತಿಯನ್ನುಪರಿಗಣಿಸಿ ಅಸ್ಸಾಂ ಜನರು ಮಿಜೋರಾಂಗೆ ಪ್ರಯಾಣಿಸದಂತೆ ಸೂಚಿಸಲಾಗಿದೆʼ ಎಂದು ಅಸ್ಸಾಂ ಸರ್ಕಾರ ಸೂಚಿಸಿದೆ.ಮಾತ್ರವಲ್ಲದೆ, ಕೆಲಸದ ಕಾರಣಗಳಿಂದಾಗಿ ಮಿಜೋರಾಂನಲ್ಲಿ ಉಳಿದುಕೊಂಡಿರುವವರೂ ʼಅತ್ಯಂತ ಜಾಗರೂಕರಾಗಿರಿʼ ಎಂದೂ ತಿಳಿಸಿದೆ.

ಗಲಭೆ ನಡೆದ ಸ್ಥಳಕ್ಕೆ ಕೇಂದ್ರ ಮೀಸಲು ಪೊಲೀಸ್‌ ಪಡೆಯನ್ನು (ಸಿಆರ್‌ಪಿಎಫ್)‌ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.