ADVERTISEMENT

ತೆಲಂಗಾಣ ಪರಿಷತ್‌ ಚುನಾವಣೆ: ಬಿಜೆಪಿ ಅಭ್ಯರ್ಥಿಯನ್ನು ಮಣಿಸಿದ ಪಿವಿಎನ್‌ ಮಗಳು

ಪಿಟಿಐ
Published 21 ಮಾರ್ಚ್ 2021, 7:39 IST
Last Updated 21 ಮಾರ್ಚ್ 2021, 7:39 IST
ಪಿ.ವಿ.ಎನ್‌ ಪುತ್ರಿಗೆ ಪಕ್ಷದ ಬಿ. ಫಾರಂ ಹಸ್ತಾಂತರಿಸಿದ್ದ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್‌ (ಪಿಟಿಐ)
ಪಿ.ವಿ.ಎನ್‌ ಪುತ್ರಿಗೆ ಪಕ್ಷದ ಬಿ. ಫಾರಂ ಹಸ್ತಾಂತರಿಸಿದ್ದ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್‌ (ಪಿಟಿಐ)   

ಹೈದರಾಬಾದ್‌: ಮಾಜಿ ಪ್ರಧಾನಮಂತ್ರಿ ಪಿ.ವಿ ನರಸಿಂಹ ರಾವ್‌ ಅವರ ಪುತ್ರಿ, ಟಿಆರ್‌ಎಸ್‌ ಅಭ್ಯರ್ಥಿ ಎಸ್‌ ವಾಣಿ ದೇವಿ ಅವರು ಮೆಹಬೂಬನಗರ-ರಂಗಾರೆಡ್ಡಿ-ಹೈದರಾಬಾದ್‌ ಪದವೀದರರ ಕ್ಷೇತ್ರದಿಂದ ಶನಿವಾರ ಚುನಾಯಿತರಾಗಿದ್ದಾರೆ.

ತಮ್ಮ ಸಮೀಪ ಸ್ಪರ್ಧಿ ವಿಧಾನಪರಿಷತ್‌ನ ಹಾಲಿ ಸದಸ್ಯ, ಬಿಜೆಪಿಯ ಎನ್‌ ರಾಮಚಂದ್ರ ರಾವ್‌ ಅವರನ್ನು ಪಿವಿಎನ್‌ ಪುತ್ರಿ ವಾಣಿ ಅವರು ಮಣಿಸಿದ್ದಾರೆ. ಚುನಾವಣೆಯಲ್ಲಿ ಗೆದ್ದ ವಾಣಿ ಅವರು ಶನಿವಾರ ರಾತ್ರಿ ಚುನಾವಣಾ ಅಧಿಕಾರಿಯಿಂದ ಮಾನ್ಯತೆ ಪತ್ರ ಸ್ವೀಕರಿಸಿದರು.

ಮೆಹಬೂಬನಗರ-ರಂಗಾರೆಡ್ಡಿ-ಹೈದರಾಬಾದ್‌ ಮತ್ತು ವಾರಂಗಲ್‌-ಕಮ್ಮಮ್‌-ನಲ್ಗೊಂಡಾ ಪದವೀದರ ಕ್ಷೇತ್ರಗಳಿಗೆ ಮಾರ್ಚ್‌ 14ರಂದು ಮತದಾನ ನಡೆದಿತ್ತು. ಶನಿವಾರ ಫಲಿತಾಂಶ ಪ್ರಕಟವಾಗಿದೆ. ವಾರಂಗಲ್‌-ಕಮ್ಮಮ್‌-ನಲ್ಗೊಂಡಾ ಕ್ಷೇತ್ರದಲ್ಲೂ ಟಿಆರ್‌ಎಸ್‌ ಅಭ್ಯರ್ಥಿ ರಾಜೇಶ್ವರ್‌ ರೆಡ್ಡಿ ಮುನ್ನಡೆ ಸಾಧಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.