ADVERTISEMENT

ಆಗಸ್ಟ್ 4ರ ವರೆಗೆ ಇ.ಡಿ ಕಸ್ಟಡಿಗೆ ಶಿವಸೇನಾ ನಾಯಕ ಸಂಜಯ್‌ ರಾವುತ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಆಗಸ್ಟ್ 2022, 17:57 IST
Last Updated 1 ಆಗಸ್ಟ್ 2022, 17:57 IST
ಸಂಜಯ್‌ ರಾವುತ್
ಸಂಜಯ್‌ ರಾವುತ್   

ಮುಂಬೈ/ಔರಂಗಾಬಾದ್‌: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಶಿವಸೇನಾದ ಮುಖಂಡ ಸಂಜಯ ರಾವುತ್‌ ಅವರನ್ನುವಿಶೇಷ ನ್ಯಾಯಾಲಯವು ಗುರುವಾರದ (ಆ. 4) ವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿದೆ.

ಭಾನುವಾರ ರಾತ್ರಿ ಬಂಧಿಸಲಾದ ರಾವುತ್ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ.) ಹಣ ಅಕ್ರಮ ವರ್ಗಾವಣೆ ತಡೆ ನ್ಯಾಯಾಲಯದ ನ್ಯಾಯಾಧೀಶ ಎಂ.ಜಿ. ದೇಶಪಾಂಡೆ ಅವರ ಮುಂದೆ ಸೋಮವಾರ ಹಾಜರು
ಪಡಿಸಿತು. ತನಿಖೆಗಾಗಿ ಎಂಟು ದಿನಗಳ ಅವಧಿಗೆ ವಶಕ್ಕೆ ಒಪ್ಪಿಸಬೇಕು ಎಂದು ಕೋರಿತು. ಅಪರಾಧ ಕೃತ್ಯದಿಂದ ಬಂದಹಣದಲ್ಲಿ ರಾವುತ್‌ ಮತ್ತು ಅವರಕುಟುಂಬದವರು ನೇರ ಫಲಾನುಭವಿ
ಗಳು ಎಂದು ಇ.ಡಿ. ಪರ ವಕೀಲರು ವಾದಿಸಿದರು.

ಹಿರಿಯ ವಕೀಲ ಅಶೋಕ್‌ ಮುಂಡರಗಿ ಅವರು ರಾವುತ್ ಪರವಾಗಿ ವಾದಿಸಿದರು. ರಾವುತ್‌ ವಿರುದ್ಧ ಇರುವ ಆರೋಪಗಳು ಅಸ್ಪಷ್ಟ ಮತ್ತು ಅವರ ಬಂಧನ ರಾಜಕೀಯ ಪ್ರೇರಿತ ಎಂದು ಮುಂಡರಗಿ ವಾದಿಸಿದರು.

ADVERTISEMENT

ಪಾತ್ರಾ ಚಾಳ್‌ ನವೀಕರಣ ಯೋಜನೆಯಲ್ಲಿ ಅಕ್ರಮವಾಗಿದೆ ಎಂಬ ಪ್ರಕರಣದಲ್ಲಿ ರಾವುತ್‌ ಅವರ ಬಂಧನವಾಗಿದೆ. ರಾವುತ್ ಅವರ ಮನೆಯಲ್ಲಿ ಭಾನುವಾರ ಒಂಬತ್ತು ತಾಸು ಶೋಧ ನಡೆಸಲಾಗಿತ್ತು. ಅವರ ಮನೆಯಲ್ಲಿ ₹11.5 ಲಕ್ಷ ನಗದು ದೊರೆತಿದೆ ಎಂದು ಇ.ಡಿ. ಹೇಳಿದೆ.

ಪ್ರತಿಭಟನೆ: ರಾವುತ್ ಬಂಧನವನ್ನು ಖಂಡಿಸಿ ಮಹಾರಾಷ್ಟ್ರದ ಔರಂಗಾಬಾದ್‌
ನಲ್ಲಿ ಶಿವಸೇನಾದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ನಾಸಿಕ್‌ನಲ್ಲಿಯೂ ಪ್ರತಿಭಟನೆ ನಡೆದಿದೆ.ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ರಾವುತ್‌ ಕುಟುಂಬದ ಸದಸ್ಯರನ್ನು ಸೋಮವಾರ ಭೇಟಿಯಾಗಿ
ದ್ದಾರೆ.

ರಾವುತ್ ವಿರುದ್ಧ ಕೈಗೊಂಡಿರುವ ಕ್ರಮವನ್ನು ಎಐಎಂಐಎಂ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಮತ್ತು ಸಂಸದ ಇಮ್ತಿಯಾಜ್‌ ಜಲೀಲ್‌ ಕೂಡ ಟೀಕಿಸಿದ್ದಾರೆ. ಕಳೆದ 70 ವರ್ಷಗಳಲ್ಲಿ ಎಂದೂ ರಾಜಕೀಯ ದ್ವೇಷ ಸಾಧನೆಗಾಗಿ ತನಿಖಾ ಸಂಸ್ಥೆಗಳನ್ನು ಇಷ್ಟೊಂದು ದುರ್ಬಳಕೆ ಮಾಡಿಕೊಂಡಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.