ADVERTISEMENT

ಉಕ್ರೇನ್ ಸಂಘರ್ಷ: 629 ಭಾರತೀಯರೊಂದಿಗೆ ದೆಹಲಿಗೆ ಬಂದಿಳಿದ ವಾಯುಪಡೆಯ 3 ವಿಮಾನಗಳು

ಪಿಟಿಐ
Published 5 ಮಾರ್ಚ್ 2022, 5:55 IST
Last Updated 5 ಮಾರ್ಚ್ 2022, 5:55 IST
ಆಪರೇಷನ್ ಗಂಗಾ (ಸಂಗ್ರಹ ಚಿತ್ರ)
ಆಪರೇಷನ್ ಗಂಗಾ (ಸಂಗ್ರಹ ಚಿತ್ರ)   

ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ 629 ಭಾರತೀಯರನ್ನು ಐಎಎಫ್‌ನ ಮೂರು ವಿಮಾನಗಳ ಮೂಲಕ ಶನಿವಾರ ಬೆಳಿಗ್ಗೆ ಸ್ವದೇಶಕ್ಕೆ ಕರೆತಲಾಗಿದೆ ಎಂದು ವಾಯುಪಡೆಯು ತಿಳಿಸಿದೆ.

ಉಕ್ರೇನ್‌ನ ನೆರೆಯ ರಾಷ್ಟ್ರಗಳಾದ ರೊಮೇನಿಯಾ, ಸ್ಲೋವಾಕಿಯಾ ಹಾಗೂ ಪೊಲೆಂಡ್‌ನಿಂದ ಹಾರಾಟ ಆರಂಭಿಸಿದ ಈ ವಿಮಾನಗಳು ದೆಹಲಿಯ ಹಿಂಡನ್ ವಾಯುನೆಲೆಗೆ ಬಂದಿಳಿದಿವೆ ಎಂದು ತಿಳಿಸಿದೆ.

ಉಕ್ರೇನ್ ವಾಯುಪ್ರದೇಶ ಸಂಪೂರ್ಣವಾಗಿ ಮುಚ್ಚಿರುವುದರಿಂದ ಭಾರತವು ಫೆಬ್ರುವರಿ 24ರಿಂದ ಉಕ್ರೇನ್ ನೆರೆ ದೇಶಗಳಾದ ರೊಮೇನಿಯಾ, ಹಂಗೇರಿ, ಸ್ಲೋವಾಕಿಯಾ ಮತ್ತು ಪೊಲೆಂಡ್‌ನಿಂದ ನಾಗರಿಕರನ್ನು ಸ್ಥಳಾಂತರಿಸುತ್ತಿದೆ.

'ಆಪರೇಷನ್ ಗಂಗಾ' ಭಾಗವಾಗಿ ಇಲ್ಲಿಯವರೆಗೆ 2,056 ಭಾರತೀಯರನ್ನು ಕರೆ ತರಲು ವಾಯುಪಡೆಯು 10 ವಿಮಾನಗಳ ಹಾರಾಟ ನಡೆಸಿದ್ದು, 26 ಟನ್ ಪರಿಹಾರ ಸಾಮಾಗ್ರಿಗಳನ್ನು ಹೊತ್ತೊಯ್ದಿದೆ.

ಭಾರತೀಯ ವಾಯುಪಡೆಯು ಈ ಮಹತ್ವದ ಕಾರ್ಯಾಚರಣೆಗೆ ಸಿ-17 ವಿಮಾನಗಳನ್ನು ಬಳಕೆ ಮಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.