ADVERTISEMENT

ವರ್ಷದ ಹಿನ್ನೋಟ | ಸಾಧನೆಯ ಶಿಖರ ಏರಿದವರು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 22:30 IST
Last Updated 25 ಡಿಸೆಂಬರ್ 2025, 22:30 IST
<div class="paragraphs"><p>ದೀಪಾ ಭಾಸ್ತಿ</p></div>

ದೀಪಾ ಭಾಸ್ತಿ

   

ಸಾಹಿತ್ಯ, ಕಲೆ, ವಿಜ್ಞಾನ, ಸಂಶೋಧನೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ, ಕಠಿಣ ಪರಿಶ್ರಮ, ನಿಸ್ವಾರ್ಥ ಸೇವೆ ಮತ್ತು ಸಾಮರ್ಥ್ಯದಿಂದ ಈ ವರ್ಷದ ಸಾಧನೆಯ ಶಿಖರವನ್ನೇರಿದ ಪ್ರಮುಖರು ಇವರು 

ಶುಭಾಂಶು ಶುಕ್ಲಾ: ಜೂನ್ 25ರಿಂದ ಜುಲೈ 15ರವರೆಗೆ ‘ಆಕ್ಸಿಯಂ–4’ರ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ಕಳೆದಿದ್ದ ಶುಭಾಂಶು ಅವರು, ಬಾಹ್ಯಾಕಾಶಕ್ಕೆ ತೆರಳಿದ ಎರಡನೇ, ಐಎಸ್‌ಎಸ್‌ಗೆ ತೆರಳಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು

ADVERTISEMENT

ಬಾನು ಮುಷ್ತಾಕ್‌ ಮತ್ತು ದೀಪಾ ಭಾಸ್ತಿ: ಹಿರಿಯ ಕಥೆಗಾರ್ತಿ ಬಾನು ಮುಷ್ತಾಕ್‌ ಅವರ ಆಯ್ದ ಸಣ್ಣ ಕಥೆಗಳ ಅನುವಾದಿತ ಕೃತಿ ‘ಹಾರ್ಟ್‌ ಲ್ಯಾಂಪ್‌’ಗೆ ‘ಅಂತರರಾಷ್ಟ್ರೀಯ ಬುಕರ್‌ ಪ್ರಶಸ್ತಿ’ ಒಲಿದು ಬಂತು. ಕನ್ನಡಕ್ಕೆ ಬಂದ ಮೊದಲ ‘ಅಂತರರಾಷ್ಟ್ರೀಯ ಬುಕರ್‌ ಪ್ರಶಸ್ತಿ’ ಇದು. ಕಥಾ ಸಂಕಲನವೊಂದಕ್ಕೆ ಈ ಗೌರವ ಲಭಿಸುತ್ತಿರುವುದು ಕೂಡ ಇದೇ ಮೊದಲು. ಈ ಪ್ರಶಸ್ತಿಗೆ ಭಾಜನರಾದ ಮೊದಲ ಭಾರತೀಯ ಅನುವಾದಕಿ ಎಂಬ ಹಿರಿಮೆಗೆ ಕನ್ನಡದವರೇ ಆದ ದೀಪಾ ಭಾಸ್ತಿ ಪಾತ್ರರಾದರು

ಡಾ. ಜಯಶ್ರೀ ವೆಂಕಟೇಶನ್: ಭಾರತೀಯ ಪರಿಸರ ಕಾರ್ಯಕರ್ತೆಯಾದ ಅವರು ‘ವೆಟ್‌ಲ್ಯಾಂಡ್ ವೈಸ್ ಯೂಸ್’ ವಿಭಾಗದಲ್ಲಿ 2025ರ ವಾರ್ಷಿಕ  (ಆರ್ದ್ರಭೂಮಿಗಳ ಸಂರಕ್ಷಣೆಗಾಗಿ) ರಾಮ್ಸರ್ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಎಂಬ ಮನ್ನಣೆ ಗಳಿಸಿದರು

ಮೋಹನ್‌ಲಾಲ್‌: ಮಲಯಾಳ ಚಿತ್ರರಂಗದ ಹಿರಿಯ ನಟ, 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಮೋಹನ್‌ಲಾಲ್‌ ಅವರು ಭಾರತೀಯ ಸಿನಿಮಾ ಕ್ಷೇತ್ರದ ಅತ್ಯುನ್ನತ ಗೌರವ ಎನಿಸಿರುವ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ಗೆ ಆಯ್ಕೆಯಾದರು

ವರ್ಷಾ ದೇಶಪಾಂಡೆ: 2025ರ ವಿಶ್ವಸಂಸ್ಥೆಯ ಜನಸಂಖ್ಯಾ ಪ್ರಶಸ್ತಿಯನ್ನು ಭಾರತದ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಮತ್ತು ವಕೀಲೆ ವರ್ಷಾ ದೇಶಪಾಂಡೆ ಅವರು ಪಡೆದರು. ಲಿಂಗ ಸಮಾನತೆ, ಸಂತಾನೋತ್ಪತ್ತಿ ಹಕ್ಕುಗಳು ಮತ್ತು ಲಿಂಗ ಆಧಾರಿತ ಗರ್ಭಪಾತಗಳನ್ನು ತಡೆಗಟ್ಟುವಲ್ಲಿ ಅವರು ನಡೆಸಿದ ಹೋರಾಟಕ್ಕಾಗಿ ಈ ಪ್ರಶಸ್ತಿ ಒಲಿಯಿತು. ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನದಂದು ನ್ಯೂಯಾರ್ಕ್‌ನಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು

ಶೀಲಾ ಗೌಡ: ಅಂತರರಾಷ್ಟ್ರೀಯ ಮಟ್ಟದ ಕಲಾಸಾಧಕರಿಗೆ ಕೊಡಮಾಡುವ ಪ್ರತಿಷ್ಠಿತ ‘ಸ್ಯಾಮ್‌ ಗಿಲ್ಲಿಯಾಮ್‌ ಪ್ರಶಸ್ತಿ’ಗೆ ಈ ವರ್ಷ ಕನ್ನಡತಿ ಕಲಾವಿದೆ ಶೀಲಾ ಗೌಡ ಅವರು ಭಾಜನರಾದರು. ದಿಯಾ ಆರ್ಟ್‌ ಫೌಂಡೇಷನ್ ಮತ್ತು ಸ್ಯಾಮ್‌ ಗಿಲ್ಲಿಯಾಮ್ ಫೌಂಡೇಷನ್ ಜಂಟಿಯಾಗಿ ಏಪ್ರಿಲ್‌ನಲ್ಲಿ ಈ ಪ್ರಶಸ್ತಿಯ ಘೋಷಣೆ ಮಾಡಿತು. ಪ್ರಶಸ್ತಿಯ ಮೊತ್ತ 75 ಸಾವಿರ ಡಾಲರ್‌ (ಆಗಿನ ಮೌಲ್ಯ ₹63.49 ಲಕ್ಷ)

ಗೀತಾಂಜಲಿ ಶ್ರೀ: ಬುಕರ್‌ ಪ್ರಶಸ್ತಿ ಪುರಸ್ಕೃತ ಹಿಂದಿ ಲೇಖಕಿ ಗೀತಾಂಜಲಿ ಶ್ರೀ ಅವರ ಹಿಂದಿ ಸಣ್ಣ ಕಥೆಗಳ ಸಂಗ್ರಹ ‘ಒನ್ಸ್‌ ಎಲಿಫೆಂಟ್ಸ್‌ ಲಿವ್ಡ್‌ ಹಿಯರ್‌’ ಕೃತಿಯು ಪ್ರತಿಷ್ಠಿತ ‘ಪೆನ್‌’ ಅನುವಾದ ಪ್ರಶಸ್ತಿಗೆ ಆಯ್ಕೆಯಾಯಿತು

ಶುಭಾಂಶು ಶುಕ್ಲಾ
ಬಾನು ಮುಷ್ತಾಕ್
ಮೋಹನ್‌ಲಾಲ್‌
ಗೀತಾಂಜಲಿ ಶ್ರೀ
ಶೀಲಾ ಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.