ADVERTISEMENT

Video | ಕಾವೇರಿ ಹೋರಾಟ: ದರ್ಶನ್, ಸುದೀಪ್, ಶಿವಣ್ಣ ಅಷ್ಟೆ ನೆನಪಾಗೋದಾ?

ಪ್ರಜಾವಾಣಿ ವಿಶೇಷ
Published 25 ಸೆಪ್ಟೆಂಬರ್ 2023, 12:45 IST
Last Updated 25 ಸೆಪ್ಟೆಂಬರ್ 2023, 12:45 IST

‘ನಿಮಗೆ ಹೋರಾಟ ಅಂದ್ರೆ ಕೇವಲ ದರ್ಶನ್, ಸುದೀಪ್, ಶಿವಣ್ಣ, ಯಶ್ ಮಾತ್ರ ನೆನಪಾಗೋದಾ‘? ನಟ ದರ್ಶನ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿದೆ. ಭಾನುವಾರ ಮೈಸೂರಿನ ಬನ್ನೂರು ಪಟ್ಟಣದ ಗಂಗಾ ಸೇನೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಡೆದ ನೈಸರ್ಗಿಕ ಕೃಷಿಕರಿಗೆ 100 ಹಳ್ಳಿಕಾರ್ ತಳಿಯ ಗೋದಾನ ಸಮಾರಂಭದಲ್ಲಿ ಮಾತನಾಡಿದ ದರ್ಶನ್, ಕಾವೇರಿ ಬಗ್ಗೆ ನಟರು ಧ್ವನಿ ಎತ್ತುತ್ತಿಲ್ಲ ಎನ್ನುವವರಿಗೆ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.