ADVERTISEMENT

ಮೈಸೂರು, ಹಾಸನದಲ್ಲಿ ಅರ್ಜುನ ಸ್ಮಾರಕ: ಖಂಡ್ರೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 16:53 IST
Last Updated 5 ಡಿಸೆಂಬರ್ 2023, 16:53 IST
<div class="paragraphs"><p>ಅರ್ಜುನ ಆನೆ–&nbsp; ಕಡತ ಚಿತ್ರ</p></div>

ಅರ್ಜುನ ಆನೆ–  ಕಡತ ಚಿತ್ರ

   

ಬೆಳಗಾವಿ: ಕಾರ್ಯಾಚರಣೆಯಲ್ಲಿ ಮೃತಪಟ್ಟ ಆನೆ ಅರ್ಜುನನ ಸ್ಮಾರಕವನ್ನು ಮೈಸೂರು ಹಾಗೂ ಹಾಸನ ಜಿಲ್ಲೆಯಲ್ಲಿ ನಿರ್ಮಿಸುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಎಂಟು ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನನು ಕ್ಯಾಪ್ಟನ್, ಸೀನಿಯರ್ ಹಾಗೂ ಬಲಭೀಮ ಎಂದೆಲ್ಲ ಹೆಸರು ಪಡೆದಿದ್ದ. ಅರ್ಜುನನ ಜತೆಗೆ ನಾಡಿನ ಜನರ ನಡುವೆ ಭಾವನಾತ್ಮಕ ಸಂಬಂಧವಿತ್ತು. ಈ ಕಾರಣದಿಂದಾಗಿ, ಅರ್ಜುನನ ನೆನಪು ಸದಾ ಉಳಿಯುವಂತೆ ಮಾಡಲು ಸ್ಮಾರಕ ನಿರ್ಮಿಸುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.