ADVERTISEMENT

ಮೊದಲ ‘ಕರ್ನಾಟಕ ರತ್ನ’ ಪಶಸ್ತಿ ಸಂದಿದ್ದು ಯಾರಿಗೆ? ಇಲ್ಲಿದೆ ಪುರಸ್ಕೃತರ ಪಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಸೆಪ್ಟೆಂಬರ್ 2025, 15:32 IST
Last Updated 11 ಸೆಪ್ಟೆಂಬರ್ 2025, 15:32 IST
   

ಬೆಂಗಳೂರು: ಕನ್ನಡ ಚಿತ್ರರಂಗ ಖ್ಯಾತ ಕಲಾವಿದರಾದ ಸಹಸ ಸಿಂಹ ಖ್ಯಾತಿಯ ವಿಷ್ಣುವರ್ಧನ್ ಹಾಗೂ ಬಿ. ಸರೋಜಾದೇವಿಯವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡುವುದಾಗಿ ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ನೀಡಬೇಕು ಎಂದು ನಟಿಯರ ನಿಯೋಗವೊಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಮನವಿ ಮಾಡಿತ್ತು. ಇದೀಗ ಅವರ ಜೊತೆಗೆ ಈ ವರ್ಷ ಅಗಲಿದ ಸರೋಜಾದೇವಿಯವರಿಗೂ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸರ್ಕಾರ ಘೋಷಣೆ ಮಾಡಿದೆ.

ಈವರೆಗೆ ಕರ್ನಾಟಕ ರತ್ನ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ.

ADVERTISEMENT
ವರ್ಷಪ್ರಶಸ್ತಿ ಪುರಸ್ಕೃತರುಕ್ಷೇತ್ರ
1992ಕುವೆಂಪುಸಾಹಿತ್ಯ
1992ರಾಜ್‌ ಕುಮಾರ್‌ಸಿನಿಮಾ
1999ಎಸ್. ನಿಜಲಿಂಗಪ್ಪರಾಜಕೀಯ
2000ಸಿ.ಎನ್‌.ಆರ್ ರಾವ್‌ವಿಜ್ಞಾನ
2001ದೇವಿ ಶೆಟ್ಟಿವೈದ್ಯಕೀಯ
2005ಭೀಮಸೇನ್ ಜೋಶಿಸಂಗೀತ
2007ಶಿವಕುಮಾರ ಸ್ವಾಮಿಜಿಸಮಾಜ ಸೇವೆ
2008ಜವರೇಗೌಡಶಿಕ್ಷಣ ಹಾಗೂ ಸಾಹಿತ್ಯ
2009ವಿರೇಂದ್ರ ಹೆಗ್ಗಡೆಸಮಾಜ ಸೇವೆ
2002ಪುನೀತ್ ರಾಜ್‌ ಕುಮಾರ್ (ಮರಣೋತ್ತರವಾಗಿ)ಸಿನಿಮಾ ಹಾಗೂ ಸಮಾಜ ಸೇವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.