ADVERTISEMENT

ದ್ವಿತೀಯ ಪಿಯುಸಿ ಫಲಿತಾಂಶ | ರೈತನ ಮಗನಿಗೆ ಮೊದಲ ಸ್ಥಾನ

ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದ ಕಾಲೇಜಿನ ಪ್ರಾಂಶುಪಾಲ ಎಚ್‌.ಎನ್‌. ವೀರಭದ್ರಪ್ಪ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 21:45 IST
Last Updated 14 ಜುಲೈ 2020, 21:45 IST
ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕರೆಗೌಡ ದಾಸನಗೌಡ್ರ ಅವರನ್ನು ಪ್ರಾಂಶುಪಾಲ ವೀರಭದ್ರಪ್ಪ ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದರು. ಆಡಳಿತ ಮಂಡಳಿ ಸದಸ್ಯರು ಆರತಿ ಬೆಳಗಿದರು
ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕರೆಗೌಡ ದಾಸನಗೌಡ್ರ ಅವರನ್ನು ಪ್ರಾಂಶುಪಾಲ ವೀರಭದ್ರಪ್ಪ ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದರು. ಆಡಳಿತ ಮಂಡಳಿ ಸದಸ್ಯರು ಆರತಿ ಬೆಳಗಿದರು   

ಕೊಟ್ಟೂರು (ಬಳ್ಳಾರಿ ಜಿಲ್ಲೆ): ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 594 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಇಲ್ಲಿನ ಇಂದು ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿ ಕರೆಗೌಡ ದಾಸನಗೌಡ್ರು ಅವರನ್ನು ಪ್ರಾಂಶುಪಾಲಎಚ್.ಎನ್. ವೀರಭದ್ರಪ್ಪ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದರು. ಕರೆಗೌಡ,ಹೂವಿನಹಡಗಲಿ ತಾಲ್ಲೂಕಿನ ಮಹಜನದಹಳ್ಳಿಯ ಕೃಷಿಕ ಕೊಟ್ರೇಶ–ಶಾಂತಮ್ಮ ದಂಪತಿಯ ಪುತ್ರ.

ಬೆಳಿಗ್ಗೆ ಫಲಿತಾಂಶ ಪ್ರಕಟಗೊಳ್ಳುವ ವೇಳೆಗೆ ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿಯನ್ನು ಅಪ್ಪಿಕೊಂಡು ಶಹಬ್ಬಾಸ್‌ಗಿರಿ ನೀಡಿದ ಪ್ರಾಂಶುಪಾಲರು ಸಂತಸ ತಾಳಲಾಗದೆ, ತಮ್ಮ ಹೆಗಲ ಮೇಲೆ ಹೊತ್ತುಕೊಂಡು ನೆರೆದವರಲ್ಲಿ ಅಚ್ಚರಿ ಮೂಡಿಸಿದರು. ಅವರಿಬ್ಬರಿಗೂ ಆಡಳಿತ ಮಂಡಳಿ ಸದಸ್ಯರು ಆರತಿ ಬೆಳಗಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

‘ಸತತ ಐದು ವರ್ಷದಿಂದ ಕಲಾ ವಿಭಾಗದಲ್ಲಿ ಕಾಲೇಜು ಪ್ರಥಮ ಸ್ಥಾನ ಪಡೆಯುತ್ತಿದೆ. ಕರೆಗೌಡ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಮೊದಲ ಹತ್ತು ಸ್ಥಾನಗಳಿಸಿ ರಾಜ್ಯದ ಗಮನ ಸೆಳೆದಿದ್ದಾರೆ.ಈ ಸಾಧನೆಗೆ ಪ್ರಾಥಮಿಕ, ಪ್ರೌಢ ಶಿಕ್ಷಣ ಉತ್ತಮವಾಗಿರುವುದರ ಜೊತೆಗೆ ಶಿಕ್ಷಕರ ತಂಡದ ಪರಿಶ್ರಮ ಇದೆ’ ಎಂದು ಪ್ರಾಂಶುಪಾಲರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.