ADVERTISEMENT

ರಕ್ಷಿತ್‌–ರಶ್ಮಿಕಾ ಲವ್ ಬ್ರೇಕಪ್‌: ಕಿಚ್ಚ ಸುದೀಪ್ ಕಿಡಿಕಾರಿದ್ದು ಯಾರ ವಿರುದ್ಧ?

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2018, 14:41 IST
Last Updated 13 ಸೆಪ್ಟೆಂಬರ್ 2018, 14:41 IST
   

ಬೆಂಗಳೂರು: ಚಂದನವನದ ಕ್ಯೂಟ್ ಜೋಡಿ, ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ಲವ್‌ ಬ್ರೇಕಪ್‌ ವದಂತಿಗಳಿಗೆ ಸಂಬಂಧಿಸಿದಂತೆ ನಟ ರಕ್ಷಿತ್‌ ಫೇಸ್‌ಬುಕ್‌ನಲ್ಲಿ ಸ್ಪಷ್ಟನೆ ನೀಡಿರುವ ಬೆನ್ನಲೇ ಕಿಚ್ಚ ಸುದೀಪ್‌ ಇದೀಗ ರಕ್ಷಿತ್ ಶೆಟ್ಟಿಗೆ ನೈತಿಕ ಬೆಂಬಲ ನೀಡಿದ್ದಾರೆ.

ಲವ್‌ ಬ್ರೇಕಪ್‌ ವಿಚಾರಕ್ಕೆ ಸಂಬಂಧಿಸಿದ ಎಲ್ಲ ಗೊಂದಲಗಳು ಶೀಘ್ರದಲ್ಲೇ ಬಗೆಹರಿಯಲಿದ್ದು, ವದಂತಿಗಳತ್ತ ಗಮನಕೊಡಬಾರದು ಎಂದು ರಕ್ಷಿತ್ ಶೆಟ್ಟಿ ಮನವಿ ಮಾಡಿದ್ದರು. ರಕ್ಷಿತ್ ಬರೆದ ಫೇಸ್‌ಬುಕ್‌ ಬರಹಕ್ಕೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.

ರಕ್ಷಿತ್ ಬರಹವನ್ನು ಮೆಚ್ಚಿಕೊಂಡಿರುವ ನಟ ಕಿಚ್ಚ ಸುದೀಪ್‌ 'ಇದುವೇ ಘನತೆ ಹಾಗೂ ಪರಿಪಕ್ವತೆ ರಕ್ಷಿತ್, ನೀನು ಚೆನ್ನಾಗಿರು' ಎಂದು ಹೇಳುವ ಮೂಲಕ ರಕ್ಷಿತ್‌ ಶೆಟ್ಟಿಗೆ ನೈತಿಕ ಬೆಂಬಲ ಸೂಚಿಸಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಇದ್ದಾರೆ ಎಂದ ಮಾತ್ರಕ್ಕೆ ಅವರು ಭಾವನೆಗಳನ್ನೂ ಸಾರ್ವಜನಿಕವಾಗಿ ಹಂಚಿಕೊಳ್ಳಬೇಕೆ? ಪ್ರತಿಯೊಬ್ಬರಿಗೂ ಅವರದ್ದೇ ಆದ ಖಾಸಗಿತನ ಇದೆ, ಅದಕ್ಕೆ ಧಕ್ಕೆ ತರುವುದು ಸ್ವಲ್ಪ ಅತಿಯಾಯಿತು ಎನಿಸಲ್ವೇ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹರಡುವವರ ವಿರುದ್ಧ ಕಿಚ್ಚ ಸುದ್ದಿ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.