ADVERTISEMENT

ಶ್ರೀಗಳ ಆರೋಗ್ಯ ಸ್ಥಿತಿ ದಿವ್ಯ ಶಕ್ತಿಯನ್ನು ಅವಲಂಬಿಸಿದೆ: ಗೃಹ ಸಚಿವ ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 21 ಜನವರಿ 2019, 9:03 IST
Last Updated 21 ಜನವರಿ 2019, 9:03 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ತುಮಕೂರು:‘ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ನೆನ್ನೆ ರಾತ್ರಿಯಿಂದ ಏರುಪೇರಾಗಿದ್ದು, ಸದ್ಯದ ಸ್ಥಿತಿ ಗಂಭೀರವಾಗಿದೆ’ಎಂದು ಗೃಹಸಚಿವ ಎಂ.ಬಿ.ಪಾಟೀಲ ಹೇಳಿದರು.

‘ಶ್ರೀಗಳ ದಾಸೋಹ ಇಂದು ಲಕ್ಷಾಂತರ ಮಕ್ಕಳಿಗೆ ಬದುಕನ್ನು ನೀಡಿದೆ. ಅವರ ಆರೋಗ್ಯದ ಪರಿಸ್ಥಿತಿ ದಿವ್ಯ ಶಕ್ತಿಯನ್ನು ಅವಲಂಭಿಸಿದೆ’ ಎಂದರು.

ಸ್ವಾಭಾವಿಕವಾಗಿ ಸಾಮಾನ್ಯ ಜನರು, ಗಣ್ಯರ ಭೇಟಿ ಪರಿಸ್ಥಿತಿ ಅವಲೋಕಿಸಿ ಬ್ಯಾರಿಕೇಡ್, ಹೆಲಿಪ್ಯಾಡ್ ಸೇರಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.