ಅಬು ಧಾಭಿ: ಚೆನ್ನೈ ಹುಡುಗ ವರುಣ್ ಚಕ್ರವರ್ತಿ ಅವರ ತಿರುವು ಪಡೆಯುವ ಎಸೆತಗಳು ಮತ್ತು ಎಕ್ಸ್ಟ್ರಾ ಬೌನ್ಸ್ ಒಳಗೊಂಡ ದಾಳಿಯನ್ನು ಮೆಟ್ಟಿನಿಲ್ಲುವ ಸವಾಲು ಚೆನ್ನೈ ಸೂಪರ್ ಕಿಂಗ್ಸ್ಗೆ ಎದುರಾಗಿದೆ. ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ತಂಡ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ. ಕೋಲ್ಕತ್ತ ತಂಡ ವರುಣ್ ಚಕ್ರವರ್ತಿ ಮೇಲೆ ಭರವಸೆ ಇರಿಸಿಕೊಂಡಿದೆ.
ಐಪಿಎಲ್ ಟೂರ್ನಿಯ ಎರಡನೇ ಹಂತದಲ್ಲಿ ಚೆನ್ನೈ ಮತ್ತು ಕೋಲ್ಕತ್ತ ತಂಡಗಳು ಗೆಲುವಿನ ಹಾದಿಯಲ್ಲಿ ಹೆಜ್ಜೆ ಇರಿಸಿದ್ದು ಆಡಿರುವ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿವೆ. ಎರಡೂ ತಂಡಗಳು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿವೆ. ಹೀಗಾಗಿ ಈ ತಂಡಗಳ ನಡುವಿನ ಮುಖಾಮುಖಿ ಹೆಚ್ಚು ಕುತೂಹಲ ಕೆರಳಿಸಿದೆ.
ಕಳೆದ ಬಾರಿ ಸಿಎಸ್ಕೆ ಬ್ಯಾಟರ್ಗಳಿಗೆ ವರುಣ್ ಚಕ್ರವರ್ತಿ ಬಹುತೇಕ ಎಲ್ಲ ಪಂದ್ಯಗಳಲ್ಲೂ ತೊಡಕಾಗಿದ್ದರು. ಅವರ ದಾಳಿಯನ್ನು ಎದುರಿಸಲು ಋತುರಾಜ್ ಗಾಯಕವಾಡ್, ಫಫ್ ಡು ಪ್ಲೆಸಿ, ಅಂಬಟಿ ರಾಯುಡು ಮತ್ತು ಧೋನಿ ಪರದಾಡಿದ್ದರು. ಈ ಬಾರಿ ಅವರಿಗೆ ಚೆನ್ನೈ ಆಟಗಾರರು ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.